ಕೇದಾರನಾಥ, 23 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಹಿಮಾಲಯದ ಪವಿತ್ರ ಕಣಿವೆಯಾದ ಕೇದಾರನಾಥ ಧಾಮದಲ್ಲಿ ಚಳಿಗಾಲದ ಆರಂಭದ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ 8.30ಕ್ಕೆ ದೇವಾಲಯದ ಬಾಗಿಲುಗಳನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಮುಚ್ಚಲಾಯಿತು. ಬೆಳಗಿನ ಜಾವ 4 ಗಂಟೆಗೆ ವೇದ ಪಠಣ, ವಿಶೇಷ ಪೂಜೆ ಹಾಗೂ ಅಂತಿಮ ಆರತಿ ಕಾರ್ಯಕ್ರಮಗಳು ಜರುಗಿದವು.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಈ ಸಂದರ್ಭದಲ್ಲಿ ಹಾಜರಿದ್ದು, ರಾಜ್ಯದ ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ರುದ್ರಪ್ರಯಾಗ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರತೀಕ್ ಜೈನ್, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಕೊಂಡೆ, ಬದ್ರಿನಾಥ-ಕೇದಾರನಾಥ ದೇವಸ್ಥಾನ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್ ಥಾಪ್ಲಿಯಾಲ್ ಹಾಗೂ ಯಾತ್ರಾ ಪುರೋಹಿತರು ಮತ್ತು ಭಕ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಬಾಗಿಲು ಮುಚ್ಚಿದ ಬಳಿಕ ಬಾಬಾ ಕೇದಾರನಾಥರ ಪಲ್ಲಕ್ಕಿಯು ಉಖಿಮಠದ ಓಂಕಾರೇಶ್ವರ ದೇವಾಲಯದತ್ತ ಪ್ರಯಾಣ ಆರಂಭಿಸಿದ್ದು, ಪಲ್ಲಕ್ಕಿಯ ಮೊದಲ ನಿಲ್ದಾಣ ರಾಂಪುರವಾಗಲಿದೆ. ನಾಳೆ ಪಲ್ಲಕ್ಕಿಯು ಗುಪ್ತಕಾಶಿಗೆ ತಲುಪಲಿದ್ದು, ಅಕ್ಟೋಬರ್ 25 ರಂದು ತನ್ನ ಶೀತಕಾಲದ ವಾಸಸ್ಥಾನವಾದ ಉಖಿಮಠದ ಓಂಕಾರೇಶ್ವರ ದೇವಾಲಯವನ್ನು ತಲುಪಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
