ಹಂಪಿ ಉತ್ಸವ, 1 ಫೆಬ್ರವರಿ :
ಆ್ಯಂಕರ್: ಹಂಪಿ ಉತ್ಸವ-2024ರ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ಹಾಗೂ ವಿಜಯನಗರ ಜಿಲ್ಲಾಡಳಿತದ ಸಹಯೋಗದಲ್ಲಿ ಫೆಬ್ರವರಿ 2, 3 ಮತ್ತು 4ರಂದು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಂಪಿಯ ನಾಲ್ಕು ಪ್ರಮುಖ ವೇದಿಗೆಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಹಂಪಿಯ ಗಾಯಿತ್ರಿ ಪೀಠದಲ್ಲಿ (ಮುಖ್ಯ ವೇದಿಕೆ) ನಡೆಯುವ ಕಾರ್ಯಕ್ರಮಗಳು:
ಫೆ.2ರಂದು ಸಂಜೆ 6ರಿಂದ 7 ಗಂಟೆಯವರೆಗೆ ಬೆಂಗಳೂರಿನ ಡ್ರೀಮ್ಸ್ & ಇವೆಂಟ್ಸ್ ತಂಡದಿಂದ ಚೆಮ್ಮೀನ್ & ಉಹಿರೆ ಉಹಿರೆ ಬ್ಯಾಂಡ್ ಸಂಗೀತ ಹಾಗೂ 7ರಿಂದ 7.30ರವರೆಗೆ ಕಾಂತಾರ ರಂಗತರಂಗಿ ಹಾಗೂ ಹುಲಿನೃತ್ಯ ನಡೆಯಲಿದೆ. ಉದ್ಘಾಟನೆ ಕಾರ್ಯಕ್ರಮ ಬಳಿಕ ರಾತ್ರಿ 8.30 ರಿಂದ 8.45ರವರೆಗೆ ಬೆಂಗಳೂರಿನ ಅನುರಾಧ ಭಟ್ ಹಾಗೂ ಶಾಸ್ತ್ರೀಯ ನೃತ್ಯಗಾರರಿಂದ ಹಂಪಿಯ ವಿರೂಪಾಕ್ಷೇಶ್ವರನಿಗೆ ಭವ್ಯವಾದ ಆರಂಭಿಕ ಹಾಡು ಮತ್ತು ನೃತ್ಯ. 8.45ರಿಂದ 9ರವರೆಗೆ ಬೆಂಗಳೂರಿನ ಕರ್ನಾಟಕ ಫಿಲ್ಮ್ ಮ್ಯೂಜಿಕ್ ಅಕಾಡೆಮಿಯ ಸಂಗೀತ ಸಂಯೋಜಕರು ಹಾಗೂ ಆರಂಭಿಕ ಹಾಡುಗಾರರಿಂದ ಹಂಪಿ ಉತ್ಸವ ಗೀತೆ. 9ರಿಂದ 9.20ರವರೆಗೆ ಬೆಂಗಳೂರಿನ ಸುಮಾರಾಣಿ, ಶೃತಿ ಕಾಮತ್, ಶ್ರೀನಿವಾಸ್, ಇತರೆ ಸಂಗೀತ ಸಂಯೋಜಕರು ಹಾಗೂ ನೃತ್ಯಗಾರರಿಂದ ಸಿತಾರ್ ಸಂಯೋಜನೆ ಸಂಗೀತ ಕಾರ್ಯಕ್ರಮ. 9.20ರಿಂದ 9.40ರವರೆಗೆ ಬೆಂಗಳೂರಿನ ಗಿಚ್ಚಿಗಿಲಿಗಿಲಿ ತಂಡದಿಂದ ಹಾಸ್ಯ ಸಂಯೋಜನೆ ಕಾರ್ಯಕ್ರಮ. 9.40ರಿಂದ 10ರವರೆಗೆ ಬೆಂಗಳೂರಿನ ವಿದ್ವಾನ್ ಪ್ರವೀಣ ಗೋಡಕಿಂಡಿ ಮತ್ತು ತಂಡದಿಂದ ಕೊಳಲು ವಾದನ ಕಾರ್ಯಕ್ರಮ. 10ರಿಂದ 12 ಗಂಟೆಯವರೆಗೆ ಬೆಂಗಳೂರಿನ ವಿಜಯಪ್ರಕಾಶ, ಅನುರಾಧ, ಉಷಾ, ದಿವ್ಯಾ, ಮಂಗಳಾ ಮತ್ತು ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಎದುರು ಬಸವಣ್ಣ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳು:
ಫೆ.2ರಂದು ರಾತ್ರಿ 8.15 ರಿಂದ 8.45 ರವರೆಗೆ ಹೊಸಪೇಟೆ ಕಡ್ಡಿರಾಂಪುರದ ಹಂಪಿ ವಿರುಪಾಕ್ಷೇಶ್ವರ ಸಾಂಸ್ಕøತಿಕ ಬುಡ್ಗ ಜಂಗಮ ಹಗಲುವೇಶ ಕಲಾವಿದರ ಸಂಘದಿಂದ ಹನುಮರಾಮಯಣ ಕಾರ್ಯಕ್ರಮ ನೆಡೆಯಲಿದೆ. 8.45 ರಿಂದ 9 ರವರೆಗೆ ಬೆಂಗಳೂರಿನ ವಿಶಾಲ್ ಹರಿಕಿರಣ್ ಮತ್ತು ತಂಡದವರಿಂದ ಕುಚುಪುಡಿ. 9 ರಿಂದ 9.15 ರವರೆಗೆ ಕುಷ್ಟಗಿಯ ದುರುಗಪ್ಪ ಹಿರೇಮನಿ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ. 9.15 ರಿಂದ 9.30 ರವರೆಗೆ ಬೆಂಗಳೂರಿನ ಸೃಷ್ಟಿ ಅಭಿನಯ ಕಲಾವಿದರ ಕೇಂದ್ರದ ಎ.ವಿ ಸತ್ಯನಾರಾಯಣ ಮತ್ತು ತಂಡದವರಿಂದ ನೃತ್ಯ ರೂಪಕ, 9.30 ರಿಂದ 9.45 ರವರೆಗೆ ಬಳ್ಳಾರಿಯ ಮೇದಾ ಮ್ಯೂಸಿಕಲ್ ಸ್ಕೂಲಿನ ಕೆ. ರಾಮ್ ಕಿರಣ್ ಮತ್ತು ತಂಡದವರಿಂದ ವೀಣಾ ವಾದನ, 9.45 ರಿಂದ 10 ರವರೆಗೆ ಬಳ್ಳಾರಿ ಮಣಿಕಮಠ ಸೂಪರ್ ಮಾರ್ಕೆಟ್ ನ ಎಸ್.ಪ್ರಗತಿ ಮತ್ತು ತಂಡದವರಿಂದ ಕುಚುಪುಡಿ, 10 ರಿಂದ 10.15 ರವರೆಗೆ ಬೀದರ್ ಜಿಲ್ಲೆ ನೇಮಳಖೇಡದ ಪವಿತ್ರಾ ವಿಶ್ವನಾಥ ಮತ್ತು ತಂಡದವರಿಂದ ಸುಗಮ ಸಂಗೀತ, 10.15 ರಿಂದ 10.30ರವರೆಗೆ ಧಾರವಾಡದ ವಿಶ್ವನಾಥ ಹಾವೇರಿ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ, 10.30 ರಿಂದ 10.45ರವರೆಗ ಕಲಬುರಗಿಯ ಶಂಕ್ರಪ್ಪ ಭಗವಂತಪ್ಪ ಹೂಗಾರ್ ಮತ್ತು ತಂಡದವರಿಂದ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ಹಾಗೂ 10.45 ರಿಂದ 11.15ರವರೆಗೆ ಕೂಡ್ಲಿಗಿಯ ಕೊಟ್ಟೂರು ಮತ್ತು ಕೂಡ್ಲಿಗಿ ತಾಲೂಕಿನ ಸರ್ಕಾರಿ ನೌಕರರ ಕಲಾ ತಂಡದಿಂದ ಸಾಕ್ರೆಟಿಸ್ ನಾಟಕ ಕಾರ್ಯಕ್ರಮ ನೆಡೆಯಲಿವೆ.
ವಿರುಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳು:
ಫೆ.2ರಂದು ಸಂಜೆ 5 ರಿಂದ 5.15 ರವರೆಗೆ ಕೊಟ್ಟೂರಿನ ಕುಮಾರಸ್ವಾಮಿ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ, 5.15 ರಿಂದ 5.25 ರವರೆಗೆ ಬುಕ್ಕಸಾಗರದ ಶಿವಕುಮಾರ ಆರ್.ಎಸ್ ಮತ್ತು ತಂಡದವರಿಂದ ಜಾದೂ ಪ್ರದರ್ಶನ, 5.25 ರಿಂದ 5.35 ರವರೆಗೆ ಬೆಂಗಳೂರಿನ ವಸುದೇಂದ್ರ ಎಲ್ ವೈದ್ಯ ಮತ್ತು ತಂಡದವರಿಂದ ದಾಸವಾಣಿ, 5.35 ರಿಂದ 5.45 ರವರೆಗೆ ಹೊಸಪೇಟೆಯ ವಾಲ್ಯಾನಾಯಕ್ ಮತ್ತು ತಂಡದವರಿಂದ ಜಾನಪದಗೀತೆ, 5.45 ರಿಂದ 6 ರವರೆಗ ಚಪ್ಪರದಹಳ್ಳಿಯ ಆರ್ ಜಾಹ್ನವಿಮತ್ತು ತಂಡದವರಿಂದ ಕುಚುಪುಡಿ ನೃತ್ಯ, 6 ರಿಂದ 6.15 ರವರೆಗೆ ಹೊಸಪೇಟೆಯ ಕೆ. ಸಣ್ಣತಿಮ್ಮ ಕಾಕುಬಾಳು ಮತ್ತು ತಂಡದವರಿಂದ ಕ್ಲಾರಿನೆಟ್ ವಾದನ, 6.15 ರಿಂದ 6.30 ರವರೆಗೆ ಹೊಸಪೇಟೆಯ ಎ ಅಜಿತ್ ಕುಮಾರ್ ಮತ್ತು ತಂಡದವರಿಂದ ಕರಾಟೆ ಕಲೆ, 6.30 ರಿಂದ 6.45 ರವರೆಗೆ ದಾವಣಗೆರೆ ಗಂಗನಕಟ್ಟೆಯ ಮಾರಿಕಾಂಬ ಭಜನಾ ಮಂಡಳಿಯಿಂದ ಭಜನೆ, 6.45 ರಿಂದ 7 ರವರೆಗೆ ಹಗರಿಬೊಮ್ಮನಹಳ್ಳಿಯ ಪ್ರಿಯಾಂಕ ಎಚ್.ಬಿ ಮತ್ತು ತಂಡದವರಿಂದ ಭಾವಗೀತೆಗಳು 7 ರಿಂದ 7.15 ರವರೆಗೆ ಹೊಸಪೇಟೆಯ ವಿದುಷಿ ಅರುಣಾ ನಾಗರಾಜ ಮತ್ತು ತಂಡದವರಿಂದ ಭರತನಾಟ್ಯ, 7.15 ರಿಂದ 7.30 ರವರೆಗೆ ಹರಪನಹಳ್ಳಿಯ ಮದ್ದಾನ ಕುಮಾರ ಕುಲಹಳ್ಳಿ ಮತ್ತು ತಂಡದವರಿಂದ ಸುಗಮ ಸಂಗೀತ, 7.30 ರಿಂದ 7.45 ರವರೆಗೆ ಹಡಗಲಿಯ ಪೂಜಾರ ಬಸವರಾಜಪ್ಪ ಒಳಗುಂದಿ ಮತ್ತು ತಂಡದವರಿಂದ ಹಿಂದೂಸ್ಥಾನಿ ಸಂಗೀತ, 7.45 ರಿಂದ 8 ರವರೆಗೆ ಹೊಸಪೇಟೆ ಜಂಭುನಾಥನಹಳ್ಳಿಯ ವಿರುಪಾಕ್ಷೇಶ್ವರ ಸುಡುಗಾಡು ಸಿದ್ದರ ಸಂಘದಿಂದ ಸುಡುಗಾಡು ಸಿದ್ದರ ಕೈಚಳಕ, 8 ರಿಂದ 8.15 ರವರೆಗೆ ಹರಪನಹಳ್ಳಿ ಬಸವನಾಳುವಿನ ನೈಪುಣ್ಯ ಟ್ರಸ್ಟ್ ನಿಂದ ಜಾನಪದ ನೃತ್ಯ ಕಾರ್ಯಕ್ರಮ, 8.15 ರಿಂದ 8.30 ರವರೆಗೆ ಹಡಗಲಿಯ ಶರಾಫ ರೇಣುಕ ಮತ್ತು ತಂಡದವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, 8.30 ರಿಂದ 8.45 ರವರೆಗೆ ಹೊಸಪೇಟೆಯ ಅಚಲಾ ಬಿ.ಎಸ್ ವಿಹಾನ್ ಬಸವೇಶ್ವರ ಬಡಾವಣೆ ಮತ್ತು ತಂಡದವರಿಂದ ವೀಣಾವಾದನ, 8.45 ರಿಂದ 9 ರವರೆಗೆ ಕೊಪ್ಪಳದ ಇಂಚರ ಕಾರಟಗಿ ಮತ್ತು ತಂಡದವರಿಂದ ಭರತನಾಟ್ಯ, 9 ರಿಂದ 9.15 ರವರೆಗೆ ಕುಡುತಿನಿಯ ಚನ್ನದಾಸರ ತಬಲಾ ರಂಗಪ್ಪ ಮತ್ತು ತಂಡದವರಿಂದ ತಬಲಾ ಸೋಲೊ, 9.15 ರಿಂದ 9.30 ರವರೆಗೆ ಬೆಂಗಳೂರು ಮಹಾಲಕ್ಷ್ಮಿ ಲೇಹೌಟ್ ನ ಸ್ನೇಹ ಕಲಾವಿದರಿಂದ ರಂಗಗೀತೆಗಳು, 9.30 ರಿಂದ 9.45 ರವರೆಗೆ ಸಿಂಧನೂರಿನ ಗೌಡಪ್ಪ ಮಾಲಿಪಾಟೀಲ್ ಮತ್ತು ತಂಡದವರಿಂದ ದಿಮ್ಮಿ ತತ್ವಪದಗಳು, 9.45 ರಿಂದ 10 ರವರೆಗೆ ಹಡಗಲಿಯ ಪರುಪತ್ತರಗಾರ ಕೊಟ್ರೇಶ್ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ, 10 ರಿಂದ 10.15 ರವರೆಗೆ ಕುಕನೂರಿನ ಅಶೋಕಯ್ಯ ಹಿರೇಮಠ್ ಮತ್ತು ತಂಡದವರಿಂದ ಭಾವಗೀತೆಗಳು, 10.15 ರಿಂದ 10.25 ರವರೆಗೆ ಬೆಂಗಳೂರು ಚಾಮರಾಜಪೇಟೆಯ ಸುಕೃತ ಸಂಗೀತ ಮತ್ತು ನೃತ್ಯ ಶಾಲೆಯಿಂದ ಶಾಸ್ತ್ರೀಯ ನೃತ್ಯ, 10.25 ರಿಂದ 10.35 ರವರೆಗೆ ಹರಪನಹಳ್ಳಿ ಶಾಂತಿನಗರ ತಾಂಡದಿಂದ ಗಣೇಶ ಟಿ ಅವರಿಂದ ಸುಗಮ ಸಂಗೀತ, 10.35 ರಿಂದ 10.45 ರವರೆಗೆ ಹಡಗಲಿಯ ಕೆ ಕಾಳಮ್ಮ ಸೋಗಿ ಮತ್ತು ತಂಡದವರಿಂದ ಸಂಪ್ರದಾಯ ಹಾಡುಗಳು ಹಾಗೂ 10.45 ರಿಂದ 11 ರವರೆಗೆ ಹರಪನಹಳ್ಳಿಯ ಎ ಶಂಕ್ರಾಚಾರಿ ಬಾಗಳಿ ಮತ್ತು ತಂಡದವರಿಂದ ವಚನ ಗಾಯನ ಕಾರ್ಯಕ್ರಮಗಳು ನೆಡೆಯಲಿವೆ.
ಸಾಸಿವೆಕಾಳು ಗಣಪ ವೇದಿಕೆ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳು:
ಫೆ.2ರಂದು ಸಂಜೆ 4 ರಿಂದ 4.15 ರವರೆಗೆ ಹರಪನಹಳ್ಳಿ ಮತ್ತಿಹಳ್ಳಿಯ ಪಂಪಾಚಾರಿ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನೆಡೆಯಲಿದೆ. 4.15 ರಿಂದ 4.30 ರವರೆಗೆ ಕೂಡ್ಲಿಗಿಯ ಮಂಗನಹಳ್ಳಿ ಎಚ್. ಶೇಖರಪ್ಪ ಮತ್ತು ತಂಡದವರಿಂದ ರಂಗಗೀತೆಗಳು, 4.30 ರಿಂದ 4.45 ರವರೆಗೆ ಹೂವಿನಹಡಗಲಿಯ ಎಲ್.ಪಿ ನಾಯಕ್ ಮತ್ತು ತಂಡದವರಿಂದ ಲೇಂಗಿ ನೃತ್ಯ, 4.45 ರಿಂದ 5 ರವರೆಗೆ ಕೂಡ್ಲಿಗಿ ಒಬಳಶೆಟ್ಟಿಹಳ್ಳಿಯ ಎಮ್.ಆರ್ ನುಂಕಪ್ಪ ಮತ್ತು ತಂಡದವರಿಂದ ಸುಗಮ ಸಂಗೀತ, 5 ರಿಂದ 5.15 ರವರೆಗೆ ಹರಪನಹಳ್ಳಿ ಅರಸಿಕೆರೆಯ ಗೋಂದಳ್ಳಿ ಶಿವಾಜಿ ಮತ್ತು ತಂಡದವರಿಂದ ಗೊಂದಲಿಗರ ಪದಗಳು, 5.15 ರಿಂದ 5.30 ರವರೆಗೆ ಕೊಟ್ಟೂರಿನ ಆರ್ ಎಂ ಸಿದ್ದೇಗೌಡಡ ಮತ್ತು ತಂಡದವರಿಂದ ಸುಗಮ ಸಂಗೀತ, 5.30 ರಿಂದ 5.45 ರವರೆಗೆ ಹೊಸಪೇಟೆಯ ಎಮ್ ಸುನಿತಾ ಬಾಯಿ ಮತ್ತು ತಂಡದವರಿಂದ ದಾಸರ ಭಜನೆಗಳು, 5.45 ರಿಂದ 6 ರವರೆಗೆ ಹೂವಿನ ಹಡಗಲಿಯ ವೈ ಮಲ್ಲಪ್ಪ ಗವಾಯಿ ಮತ್ತು ತಂಡದವರಿಂದ ಬಯಲಾಟ ಪದಗಳು, 6 ರಿಂದ 6.15 ರವರೆಗೆ ಹೂವಿನ ಹಡಗಲಿಯ ಕೆ ರಾಮಾಂಜನೇಯ ಮತ್ತು ತಂಡದವರಿಂದ ಜಾನಪದ ಗಾಯನ, 6.15 ರಿಂದ 6.30 ರವರೆಗೆ ಹೊಸಪೇಟೆ ಎಂ ಪಿ ಪ್ರಕಾಶ್ ನಗರದಸವಿತಾ ಅಮರೇಶ್ ಮತ್ತು ತಂಡದವರಿಂದ ಹಿಂದೂಸ್ಥಾನಿ ಸಂಗೀತ, 6.30 ರಿಂದ 7 ರವರೆಗೆ ಕೊಪ್ಪಳದ ಕೇಶಪ್ಪ ಶಿಳ್ಳೇಕ್ಯಾತೆರ ಮತ್ತು ತಂಡದವರಿಂದ ತೊಗಲು ಗೊಂಬೆ ಆಟ, 7 ರಿಂದ 8 ರವರೆಗೆ ವಿಜಯನಗರ ಜಿಲ್ಲೆಯ ಹ್ಯಾರಡದ ಜನನಿ ಪುಷ್ಪಕಲಾ ಯುವಕ ಸಂಘದಿಂದ ಕರ್ಣನ ಪಟ್ಟಾಬಿಷೇಕ ನಾಟಕ, 8 ರಿಂದ 9 ರವರೆಗೆ ಕೂಡ್ಲಿಗಿಯ ಬಣಕಾರ ಮೂಗಪ್ಪ ಮತ್ತು ತಂಡದವರಿಂದ ನಾಟಕ, 9 ರಿಂದ 10 ರವರೆಗೆ ಬಳ್ಳಾರಿಯ ಆಲಾಪ ಸಂಗೀತ ಕಲಾ ಟ್ರಸ್ಟ್ ನ ಬಿ ರಮಣಪ್ಪ ಮತ್ತು ತಂಡದವರಿಂದ ಬಯಲಾಟ ಕಾರ್ಯಕ್ರಮ ಹಾಗೂ 10 ರಿಂದ 11 ರವರೆಗೆ ಕೂಡ್ಲಿಗಿ ತಾಲೂಕಿನ ಸೂಲದಹಳ್ಳಿಯ ತಿಪ್ಪೇಸ್ವಾಮಿ ಮತ್ತು ತಂಡದವರಿಂದ ಜಗಜ್ಯೋತಿ ಬಸವೇಶ್ವರ ನಾಟಕ ಕಾರ್ಯಕ್ರಮ ನೆಡೆಯಲಿವೆ ಎಂದು ತಿಳಿಸಿದೆ.
