ಬಳ್ಳಾರಿ, 2 ಜನವರಿ(ಹಿ.ಸ):
ಆ್ಯಂಕರ್ : ಬಳ್ಳಾರಿ ನಗರದ ಸ್ನೇಹ ಸಂಪುಟ ಸಭಾಂಗಣದಲ್ಲಿ ನೇಗಿಲ ಒಡೆಯ ಚಿತ್ರತಂಡದ ವತಿಯಿಂದ ನೇಗಿಲ ಒಡೆಯ ಚಿತ್ರದಲ್ಲಿ ಸಹ ನಿರ್ದೇಶಕ ರಾಗಿ ಮತ್ತು ವಿವಿಧ ಚಲನಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ, ಮೆನೇಜರ್ ಆಗಿ ಕೆಲಸ ಮಾಡಿದ ಸಂದರ್ಭದಲ್ಲಿ ಮತ್ತು 2024 ಜನವರಿ ಹೊಸ ವರ್ಷದ ಮೊದಲ ದಿನದಂದು ಜನ್ಮ ದಿನವನ್ನು ಆಯೋಜನೆ ಮಾಡಲಾಗಿತ್ತು.
ಇದೇ ವೇಳೆ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ರಕ್ಷಣಾ ಕಾವಲು ಸಮಿತಿ ರಾಜ್ಯಾಧ್ಯಕ್ಷರಾದ ಉರುಕುಂದ ರೆಡ್ಡಿ ಅವರು ಮಾತನಾಡಿ ಯಾಸಿನ್ ಅವರು ಮುಂದಿನ ದಿನಗಳಲ್ಲಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಲಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ದೇವರು ಕೃಪೆ ನೀಡಲಿ ಎಂದು ಶುಭ ಹಾರೈಸಿದರು.
ನಂತರ ಕೆ.ಪಿ.ಸಿ.ಸಿ ರಾಜ್ಯ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಕೊಳಗಲ್ ಯು.ಯರ್ರಿಸ್ವಾಮಿ ಅವರು ಮಾತನಾಡಿ ಎಂ.ಡಿ.ಯಾಸಿನ್ ಬಳ್ಳಾರಿ ಕಷ್ಟ ನಿಷ್ಟುರಗಳನ್ನೆ ಎದುರಿಸಿ ಹಿಂದರಿಯದೆ ಮುನ್ನುಗ್ಗಿ ಇಂದು ವಿವಿಧ ಚಲನಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ನಮ್ಮಗೆಲ್ಲ ಬಹಳ ಹೆಮ್ಮೆ ಅನಿಸುತ್ತದೆ ಮುಂದೆ ಇನ್ನೂ ದೊಡ್ಡ ದೊಡ್ಡ ಚಿತ್ರಗಳಲ್ಲಿ ಅವಕಾಶ ಪಡೆದು ನಿರ್ದೇಶಕರಾಗಿ ಕೆಲಸ ಮಾಡಲಿ ಬಳ್ಳಾರಿ ಕೀರ್ತಿ ತರಲಿ ಎಂದು ಹಾರೈಸಿದರು.
ಈ ಸಮಯದಲ್ಲಿ ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ ಪಿ. ಶೇಖರ್ ಅವರು ಮಾತನಾಡಿ ಎಂ.ಡಿ.ಯಾಸಿನ್ ಅವರು ಬಳ್ಳಾರಿಯಲ್ಲಿ ಕೃಷ್ಣ ಮೋಹನ್ ಶೆಟ್ಟಿ ನಿರ್ದೇಶನದ ಚಿತ್ರ ನೇಗಿಲ ಒಡೆಯ ಚಿತ್ರ ಬಿಡುಗಡೆ ಸಮಯದಲ್ಲಿ ನೋಡಿದ್ದೆ ಆದ್ರೆ ಅಂದಿನಿಂದ ಇಂದಿನವರೆಗೆ ನೋದಿದ್ರೆ ನನಗೆ ಬಳ್ಳಾರಿಯಿಂದ ಬೇರೆ ರಾಜ್ಯದಲ್ಲಿ ಹೋಗಿ ಚಲನ ಚಿತ್ರದಲ್ಲಿ ಹೋಗಿ ಕೆಲಸ ಮಾಡಿದ್ದಾರೆ ಅಂದರೆ ಅದು ಅವರ ಮಾಡಿದ ಶ್ರಮ ಇಂತಹ ಪ್ರತಿಭೆ ಮುಂದೆ ದೊಡ್ಡ ಚಿತ್ರಗಳಲ್ಲಿ ನಾಯಕ ,ನಟರಾಗಿ, ನಿರ್ದೇಶಕರಾಗಿ ಬೆಳೆಯಲೆಂದು ತಾಯಿ ದುರ್ಗಮ್ಮ ದೇವಿ ಕೃಪೆ ನೀಡಲಿ ಎಂದು ಜನ್ಮ ದಿನದಲ್ಲಿ ಶುಭ ಹಾರೈಸಿ ಮಾತನಾಡಿದರು.
ಉಪ್ಪಾರ ಸಮಾಜದ ರಾಜ್ಯ ಉಪಾಧ್ಯಕ್ಷರಾದ ಸಿದ್ದೇಶ್ ಅವರು ಮಾತನಾಡಿ ಬಳ್ಳಾರಿಯಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ ಆದರೆ ಬಳ್ಳಾರಿಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಆಟೋ ಚಾಲಕನಾಗಿ ಕೆಲಸ ಮಾಡಿ ಚಿಕ್ಕ ಚಿಕ್ಕ ಚಿತ್ರಗಳಲ್ಲಿ ಕೆಲಸ ಕಾರ್ಯನಿರ್ವಹಿಸಿ ಇಂದು ದೊಡ್ಡ ದೊಡ್ಡ ಚಿತ್ರಗಳಲ್ಲಿ ಕೆಲಸ ಮಾಡುತ್ತಿರುವುದು ನಮಗೆ ಸಂತೋಷದ ಹೆಮ್ಮೆ ಅನಿಸಿದೆ, ಇವರು ಮುಂಬರುವ ದಿನಗಳಲ್ಲಿ ನಟರಾಗಲಿ ನಿರ್ದೇಶಕರಾಗಲಿ ಎಂದು ಹೊಸ ವರ್ಷದ ಜನ್ಮದಿನದ ಸಂಭ್ರಮದಲ್ಲಿ ಕೇಕ್ ಕಟ್ ಮಾಡುವ ಮೂಲಕ ಶುಭ ಹಾರೈಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿರ್ದೇಶಕ ಕೃಷ್ಣ ಮೋಹನ್ ಶೆಟ್ಟಿ, ಹೇಮಂತ್ ರಾಜ್, ಮಲ್ಲಿಕಾರ್ಜುನ ಅಜಿತ್ ಕುಮಾರ್, ಕೊಳಗಲ್ ನಾಗೇಂದ್ರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್
