ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಯೋಜನೆ ಭಾರತೀಯ ಅಂಚೆ ಕಚೇರಿಯ ಪ್ರಮುಖ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದು. 1988ರಲ್ಲಿ ಪ್ರಾರಂಭಗೊಂಡ ಈ ಯೋಜನೆಯು ಆರಂಭದಲ್ಲಿ ರೈತರಿಗಾಗಿ ಮಾತ್ರ ಜಾರಿಗೊಂಡಿತ್ತು, ಆದರೆ ಇಂದು ಯಾವುದೇ ಅರ್ಹತೆಯುಳ್ಳ ಭಾರತೀಯ ಪ್ರಜೆ ಇದರಲ್ಲಿ ಹೂಡಿಕೆ ಮಾಡಬಹುದು. ಕಿಸಾನ್ ವಿಕಾಸ್ ಪತ್ರವು ದೀರ್ಘಕಾಲೀನ ಆರ್ಥಿಕ ಶಿಸ್ತು ಹಾಗೂ ಆರೋಗ್ಯಕರ ಹೂಡಿಕೆ ಅಭ್ಯಾಸವನ್ನು ಬೆಳೆಸುವ ಮೂಲಕ ಉಳಿತಾಯವನ್ನು ಪ್ರೋತ್ಸಾಹಿಸುತ್ತಿದೆ.
BulletsIn
- ಕಿಸಾನ್ ವಿಕಾಸ್ ಪತ್ರವನ್ನು (ಕೆವಿಪಿ) 1988ರಲ್ಲಿ ಅಂಚೆ ಕಚೇರಿಯು ಪರಿಚಯಿಸಿತು.
- ಯೋಜನೆಯ ಉದ್ದೇಶ ದೀರ್ಘಕಾಲೀನ ಆರ್ಥಿಕ ಶಿಸ್ತು ಬೆಳೆಸುವದು.
- ಆರಂಭದಲ್ಲಿ ರೈತರಿಗಾಗಿ ಜಾರಿಗೊಂಡಿದ್ದರೂ, ಈಗ ಎಲ್ಲರಿಗೂ ಲಭ್ಯ.
- ಅರ್ಹತೆಯುಳ್ಳ ಯಾವುದೇ ಭಾರತೀಯ ಪ್ರಜೆ ಅಥವಾ 10 ವರ್ಷ ಮೇಲ್ಪಟ್ಟವರು ಹೂಡಿಕೆ ಮಾಡಬಹುದು.
- ಜಂಟಿ ಖಾತೆ ತೆರೆಯಲು ಗರಿಷ್ಠ ಮೂರು ಮಂದಿ ಸೇರಬಹುದು.
- ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಕೆವಿಪಿ ಖಾತೆ ತೆರೆಯಬಹುದು.
- ಯಾವುದೇ ಅಪಾಯವಿಲ್ಲದೇ, ಸಂಪತ್ತನ್ನು ಸಂಗ್ರಹಿಸಲು ಈ ಯೋಜನೆ ಸಹಾಯ ಮಾಡುತ್ತದೆ.
- ಇದರಲ್ಲಿ ಹೂಡಿಕೆಯ ಲಾಭಗಳ ಮೇಲೆ ಆದಾಯ ತೆರಿಗೆ ಅನ್ವಯವಾಗುತ್ತದೆ.
- ಇದು ದೇಶದ ಜನಪ್ರಿಯ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ.
- ಕಿಸಾನ್ ವಿಕಾಸ್ ಪತ್ರದ ಹೂಡಿಕೆಗಳಿಗೆ ಸೆಕ್ಷನ್ 80ಸಿ ಯಲ್ಲಿ ತೆರಿಗೆ ವಿನಾಯಿತಿ ಲಭ್ಯವಿಲ್ಲ.
