ರಾಯಚೂರು:
ಆ್ಯಂಕರ್ : ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಹತಾಶೆ ಮನೋಭಾವದಿಂದ
ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂಬ ಸುಳ್ಳು ಪ್ರಚಾರದಲ್ಲಿ ಕೈ ನಾಯಕರು ತೊಡಗಿಕೊಂಡಿದ್ದಾರೆಂದು ಕೇಂದ್ರ ಸಚಿವರಾದ ನಾರಾಯಣಸ್ವಾಮಿ ತಿಳಿಸಿದರು.
ಅವರಿಂದು ನಗರದ ಬಿಜೆಪಿ ಎಸ್.ಸಿ ಮೋರ್ಚಾದಿಂದ ಹಮ್ಮಿಕೊಂಡಿದ್ದ ವಿಜಯಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ ಇದು ದೇಶದ ಚುನಾವಣೆ . ವಿಶ್ವ ಮೆಚ್ಚಿದ ನಾಯಕ ನರೇಂದ್ರ ಮೋದಿಯವರು ಮೊತ್ತೊಮ್ಮೆ ಪ್ರಧಾನಿಯಾಗಲಿ ಎಂದು ಬಯಸಿದ್ದಾರೆ ಆದರೆ ಕಾಂಗ್ರೆಸ್ ನವರು ಟೀಕೆ ಮಾಡಲು ಯಾವುದೇ ಅಸ್ತ್ರಗಳಿಲ್ಲ ಬರೀ ಗ್ಯಾರೆಂಟಿ, ಸಂವಿಧಾನ ಬದಲಾಸುತ್ತಾರೆಂಬ ಸುಳ್ಳು ಪ್ರಚಾರದಲ್ಲಿ ತೊಡುಗುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಆದರೆ ಮೋದಿಜಿಯವರೇ ಹೇಳಿದ್ದಾರೆ ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಸಾಧ್ಯವಿಲ್ಲವೆಂದು , ಅವರೇ ಈ ದೇಶದ ಮಹಾನ್ ಗ್ರಂಥ ಎಂದು ಸಾರಿ ಹೇಳಿದ್ದು 10 ವರ್ಷದಲ್ಲಿ ಸಂವಿಧಾನದಲ್ಲಿ ಆಶಯಕ್ಕೆ ಧಕ್ಕೆ ಬರುವಂತಹ ಕೆಲಸ ಏನಾದ್ರು ಮಾಡಿದಿಯಾ ಆದರೆ ಸಿಎಂ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರು ಕೂಡ ಬಿಜೆಪಿಯವರು ಸಂವಿಧಾನ ಬದಲಾಯಿಸುತ್ತಾರೆಂದು ಬರೀ ಸುಳ್ಳೇ ಹೇಳುತ್ತಿದ್ದಾರೆ ಅಲ್ಲದೇ ದಲಿತರಿಗೆ ಅನ್ಯಾಯ ಮಾಡಿದ್ದೇ ಕಾಂಗ್ರೆಸ್ ಗ್ಯಾರೆಂಟಿಗಳ ನೆಪದಲ್ಲಿ ಎಸ್.ಸಿ.ಟಿ.ಪಿ ಅನುದಾನವನ್ನು ಗ್ಯಾರೆಂಟಿಗಳಿಗೆ ಬಳಸುವ ಮೂಲಕ ಸಮುದಾಯದ ಜನತೆಗೆ ಅನ್ಯಾಯವೆಸಗಿದೆ ಈಗಾಗಿ ಅವರಿಗೆ ತಕ್ಕ ಪಾಠ ಕಲಿಸಲು
ಲಿತ ಸಮುದಾಯದ ಜನರು ಯಾವುದೇ ಸುಳ್ಳುಗಳಿಗೆ ಬಲಿಯಾಗದೆ ಮೋದಿಜಿವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ರಾಜಾ ಅಮರೇಶ್ವರ ನಾಯಕರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಸಂಸದರಾದ ರಾಜಾ ಅಮರೇಶ್ವರ ನಾಯಕರು ಮಾತನಾಡಿ ಈ ದೇಶದ ಅತ್ಯಂತ ಪವಿತ್ರವಾದ ಗ್ರಂಥ ಸಂವಿಧಾನವಾಗಿದೆ , ಅದನ್ನು ಬದಲಿಸು ಯಾರಿಂದಲೂ ಸಾಧ್ಯವಿಲ್ಲ ದಲಿತರ ಕಲ್ಯಾಣಕ್ಕಾಗಿ ನರೇಂದ್ರ ಮೋದಿಜಿಯವರ ಹಲವು ಜನಪರ ಕಾರ್ಯಕ್ರಮಗಳನ್ನು ತಂದಿದ್ದು ಮೋದಿಜಿಯವರು ಮೊದಲನೇ ಅವಧಿಯಲ್ಲಿ ರಾಮನಾಥ ಕೋವಿಂದರನ್ನು, ಹಾಗೂ ಎರಡನೇ ಅವಧಿಯಲ್ಲಿ ಆದಿವಾಸಿ ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮಾರವರನ್ನು ಈ ದೇಶದ ರಾಷ್ಟ್ರಪತಿಗಳನ್ನಾಗಿಸುವ ಮೂಲಕ ಸಮುದಾಯದ ಹಿತ ಕಾಪಾಡಿದೆ ಅಲ್ಲದೇ ಕಳೆದ ಐದು ವರ್ಷದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳ ಮೂಲಕ ಉಭಯ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಈಗಾಗಿ ಮೇ 7 ರಂದು ಕ್ರಮ ಸಂಖ್ಯೆ 3 ರ ಕಮಲದ ಗುರುತಿಗೆ ಮತ ನೀಡುವ ಮೂಲಕ ನನ್ನನ್ನು ಗೆಲ್ಲಿಸುವ ಮೂಲಕ ಮೋದಿಜಿಯವರ ಕೈ ಬಲಪಡಿಸಬೇಕೆಂದರು.
ಈ ಸಂದರ್ಭದಲ್ಲಿ ಹೋರಾಟಗಾರದ ಮಂದಕೃಷ್ಣ ಮಾದಿಗ, ಶಾಸಕರಾದ ಎಂ.ಕೃಷ್ಣಪ್ಪ , ಮಾಜಿ ಸಚಿವರಾದ ಪ್ರಮೋಧ್ ಮಧ್ವರಾಜ್ , ಡಾ.ಶಿವರಾಜ್ ಪಾಟೀಲ್ , ಎನ್.ಶಂಕ್ರಪ್ಪ , ರವೀಂದ್ರ ಜಲ್ದಾರ್, ಎಂ.ವಿರುಪಾಕ್ಷಿ, ನರಸಿಂಹ ನಾಯಕ್ , ಯಲ್ಲಪ್ಪ ಸೇರಿದಂತೆ ಪಕ್ಷದ ವಿವಿಧ ಮುಖಂಡರುಗಳು ಉಪಸ್ಥಿತರಿದ್ದರು.
