• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Regional > ಇತಿಹಾಸದಲ್ಲಿ ಸಾಧಕರು ಸಣ್ಣ ಸಣ್ಣ ಶಾಲೆಗಳಿಂದ ಬಂದವರೇ : ಹಿರೇಮಠ
Regional

ಇತಿಹಾಸದಲ್ಲಿ ಸಾಧಕರು ಸಣ್ಣ ಸಣ್ಣ ಶಾಲೆಗಳಿಂದ ಬಂದವರೇ : ಹಿರೇಮಠ

CliQ INDIA
Last updated: January 14, 2024 3:26 am
CliQ INDIA
Share
2 Min Read
SHARE
     ಇತಿಹಾಸದಲ್ಲಿ ಸಾಧಕರು ಸಣ್ಣ ಸಣ್ಣ ಶಾಲೆಗಳಿಂದ ಬಂದವರೇ : ಹಿರೇಮಠ
     ಇತಿಹಾಸದಲ್ಲಿ ಸಾಧಕರು ಸಣ್ಣ ಸಣ್ಣ ಶಾಲೆಗಳಿಂದ ಬಂದವರೇ : ಹಿರೇಮಠ
     ಇತಿಹಾಸದಲ್ಲಿ ಸಾಧಕರು ಸಣ್ಣ ಸಣ್ಣ ಶಾಲೆಗಳಿಂದ ಬಂದವರೇ : ಹಿರೇಮಠ

ಕೊಪ್ಪಳ, 13 ಜನವರಿ(ಹಿ.ಸ):

ಆ್ಯಂಕರ್:ಜಗತ್ತಿನ ಎಲ್ಲಾ ಇತಿಹಾಸದ ಸಾಧಕರು ಬಂದಿದ್ದು ವಿಶೇಷ ಸಣ್ಣ ಶಾಲೆಗಳಿಂದಲೇ, ನಾವೆಲ್ಲರೂ ವಿದ್ಯಾವಂತರಾಗಬೇಕು ಅದೇ ನಮ್ಮನ್ನು ಜಗತ್ತಿನ ಶ್ರೇಷ್ಠರನ್ನಾಗಿಸುತ್ತದೆ ಎಂದು ಡೆನ್ಮಾರ್ಕ ಜಿಜಿಡಬ್ಲ್ಯು ಚೇರಮನ್ ಫ್ಲೆಕ್ಸಿಟ್ರಾನ್ ಇಂಡಿಯಾದ ಸಿಇಓ ಆರ್. ಎಸ್. ಹಿರೇಮಠ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕುಷ್ಟಗಿ ರಸ್ತೆಯ ಶ್ರದ್ಧಾ ಶಿಕ್ಷಣ ಸಂಸ್ಥೆಯ ಎನ್.ಕೆ.ಪಿ.ಎಂ. ಶಾಲಡಯ 18ನೇ ವಾರ್ಷಿಕೋತ್ಸವ ಮತ್ತು ಸಾಂಸ್ಕøತಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸನ್ಮಿತ್ರ ಪಟ್ಟಣಶೆಟ್ಟಿಯವರು ಇಂಜಿನಿಯರಿಂಗ್ ಸ್ನೇಹಿತ, ಆತನ ಶೈಕ್ಷಣಿಕ ಸೇವೆ ನೋಡಲು ದೂರದಿಂದ ಬಂದಿದ್ದೇನೆ. ಜಗತ್ತಿನಲ್ಲಿ ಹುಟ್ಟಿದ ಮೇಲೆ ಇರುವ ಸಮಯದಲ್ಲಿ ಸಾಧಿಸಬೇಕು, ಸಾಧನೆ ಎಂದರೆ ಅದಕ್ಕೆ ನಿರ್ಧಿಷ್ಠವಾದ ವಿಷಯವಿಲ್ಲ, ನಮ್ಮ ಜ್ಞಾನದ ಹರಿವು ಅಷ್ಟು ವಿಸ್ತಾರಗೊಳಿಸಿಕೊಂಡು ಮುಂದೆ ಸಾಗಬೇಕು ಎಂದು ಕರೆ ನೀಡಿದರು.

ನಿವೃತ್ತ ಪ್ರಾಂಶುಪಾಲ ಸಿ. ವಿ. ಜಡಿಯವರ ಇತಿಹಾಸದ ಪುಟಗಳಲ್ಲಿ ಜನೇವರಿ 12 ಅತ್ಯಂತ ವಿಶೇಷ ದಿನ, ಕೇವಲ 35ರ ಹರೆಯದ ವಿಶ್ವದ ಕಣ್ಣಿನ ಮಾಣಿಕ್ಯ ವೀರ ಸನ್ಯಾಸಿನಿ ವಿವೇಕಾನಂದರ ಜನ್ಮದಿನದಂದು ಶಾಲಾ ವಾರ್ಷಿಕೋತ್ಸವ ಹಮ್ಮಿಕೊಂಡಿರುವದು ಉತ್ತಮ ಆಯ್ಕೆ ಎಂದರು. ಮಕ್ಕಳಿಗೆ ವಿವೇಕಾನಂದ ಸದಾ ಆದರ್ಶ. ಎನ್.ಕೆ.ಪಿ.ಎಂ. ಶಾಲೆಯನ್ನು ತಂದೆಯ ಆಶಯದಂತೆ ವಿದ್ಯಾ ಸೇವೆಗೆ ಕೆಲಸ ಮಾಡುತ್ತಿರುವದು ಅತ್ಯಂತ ಸಂತೋಷ. ಹೆಚ್ಚಿನ ಶುಲ್ಕ ಇದ್ದರೆ ಉತ್ತಮ ಶಾಲೆ ಅಲ್ಲ, ಅಕ್ಷರವನ್ನು ಎದೆಯಲ್ಲಿ ಬಿತ್ತುವ ಪ್ರೀತಿಯ ಕಾಯಕ ಮಾಡುವ ಶಾಲೆ ಶ್ರೇಷ್ಠ, ಡೊನೇಷನ್ ಹಾವಳಿ ಇಲ್ಲದ ಶಾಲೆ ಎನ್ನುವದು ಹೆಮ್ಮೆ ಎಂದರು.

ಹೊಸಪೇಟೆಯ ಮಹಿಳಾ ಬಾಲಿಕೆಯರ ಕಾಲೇಜಿನ ಉಪನ್ಯಾಸಕಿ ಪಾರ್ವತಿ ಕೆ. ಮಾತನಾಡಿ, ಸಾಕ್ರೇಟಿಸಿನ ಮಾತಿನಂತೆ ಸರಿತಪ್ಪುಗಳನ್ನು ಮತ್ತು ಬದುಕಿನ ಆಗುಹೋಗುಗಳನ್ನು ಪರೀಕ್ಷಿಸಿಕೊಳ್ಳಬೇಕು ಪರೀಕ್ಷೆಗೆ ಒಳಪಡದ ಬದುಕು ಬದುಕೇ ಅಲ್ಲ ಎನ್ನುವಂತೆ ಜೀವನ ಇರಬೇಕು. ನಮ್ಮ ಅಡೆತಡೆಗಳನ್ನು ದಾಟಿ ಮುಂದೆ ಸಾಗಿದರೆ ಮಾತ್ರ ಸಾಧನೆ ಸಾಧ್ಯ, ಸಾಧನೆಗೆ ಅಡ್ಡ ದಾರಿ ಇಲ್ಲ ಹೊರತು ಪರಿಶ್ರಮ ಮತ್ತು ಕಾರ್ಯದಿಂದ ಬರುತ್ತದೆ, ನಿರಂತರ ಪ್ರಯತ್ನ ಮಾಡಬೇಕು ಎಂದರು. ಯಶಸ್ಸು ಅಂದರೆ ಅಂಕಗಳಲ್ಲ, ಒಂದು ಸೋಲಿನಿಂದ ಯಶಸ್ಸನ್ನು ಅಲ್ಲಗಳೆಯಲು ಸಹ ಬಾರದು, ವಿದ್ಯಾರ್ಥಿ ಅಧ್ಯಯನಶೀಲನಾಗಬೇಕು ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಬಿ. ಕೆ. ಪಟ್ಟಣಶೆಟ್ಟಿ ಅವರು, ಶಾಲೆ ಅನ್ನುವದು ನಮ್ಮ ಬದುಕಾಗಿದೆ ಆದರೆ ಬದುಕಲಿಕ್ಕಲ್ಲ, ಅದು ಸೇವೆಯ ಸ್ವರೂಪದ್ದು, ಶಾಲೆಯಲ್ಲಿ ಡೊನೇಷನ್ ಇಲ್ಲದೇ ಉತ್ತಮ ಶಿಕ್ಷಣವನ್ನು ಕಡಿಮೆ ಶುಲ್ಕದಲ್ಲಿ ಮಕ್ಕಳ ಭವಿಷ್ಯ ರೂಪಿಸುತ್ತಿದ್ದೇವೆ ಎಂದರು.

ಪ್ರಾರ್ಥನೆ ಫರಿನಾ ಸುಲ್ತಾನಾ, ನಿರೂಪಣೆ ರಂಗಮ್ಮ ಕೆ. ಮಾಡಿದರೆ, ವಾರ್ಷಿಕ ವರದಿಯನ್ನು ಸವಿತಾ ಗೌಡರ ಮಾಡಿದರು, ಪ್ರಾಸ್ತಾವಿಕ ಮಧುಮತಿ ಪಟ್ಟಣಶೆಟ್ಟಿ, ಅರ್ಪಣ ಪಟ್ಟಣಶೆಟ್ಟಿ, ಅತಿಥಿ ಪರಿಚಯ ಲೇಖನ ಪಟ್ಟಣಶೆಟ್ಟಿ ಮಾಡಿದರು. ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

You Might Also Like

ಬೀದಿನಾಯಿ : ವಾಸ ಪರಿಶೀಲಿಸಿ ಲೆಕ್ಕ ನೀಡಲು ಸೂಚನೆ
ಬೈಕ್ ಅಪಘಾತ ; ಇಬ್ಬರ ಸಾವು
ಚಂಡಮಾರುತ ಪ್ರಭಾವ, ಬಹುತೇಕ ಕಡೆ ಡಿಸೆಂಬರ್ 6ರವರೆಗೆ ಮಳೆ
ಸಿರಿಧಾನ್ಯ, ಸಾವಯವ ಮೇಳ-2024ಕ್ಕೆ ತೆರೆ – Hindusthan Samachar Kannada
ಶಿಕ್ಷಣ ಜೊತೆ ಕೌಶಲ್ಯ ಇದ್ದಲ್ಲಿ ಸಾಧನೆ ಸಾಧ್ಯ : ಪಟ್ಟಣಶೆಟ್ಟಿ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ಇಬ್ಭಾಗ : ಬಸವರಾಜ ಬೊಮ್ಮಾಯಿ
Next Article ಅನಂತಕುಮಾರ್ ಹೆಗಡೆ ಹೇಳಿಕೆ: ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ -ಪರಮೇಶ್ವರ್
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?