ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದಿನಿಂದ ಮೂರು ದಿನಗಳ ಕಾಲ ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯುವ ಅಷ್ಠಲಕ್ಷ್ಮೀ ಮಹೋತ್ಸವ ೨೦೨೪ ಅನ್ನು ಉದ್ಘಾಟಿಸಲಿದ್ದಾರೆ. ಈ ಮಹೋತ್ಸವವು ಎಲ್ಲಾ ಎಂಟು ಈಶಾನ್ಯ ರಾಜ್ಯಗಳ ಸಾಂಸ್ಕೃತಿಕ, ನೈಸರ್ಗಿಕ ಮತ್ತು ಕರಕುಶಲ ಸಂಪತ್ತನ್ನು ಪ್ರದರ್ಶಿಸುವ ಮೂಲಕ ಈಶಾನ್ಯ ಭಾಗವನ್ನು ದೇಶದ ಅಭಿವೃದ್ಧಿ ಪ್ರಯತ್ನದಲ್ಲಿ ಮತ್ತಷ್ಟು ಬಲಪಡಿಸಲು ಕ್ರಮ ತೆಗೆದುಕೊಳ್ಳುತ್ತಿದೆ.
BulletsIn
- ಅಷ್ಠಲಕ್ಷ್ಮೀ ಮಹೋತ್ಸವ ೨೦೨೪ ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯಲಿದೆ.
- ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಉತ್ಸವವನ್ನು ಉದ್ಘಾಟಿಸಲಿದ್ದಾರೆ.
- ಮಹೋತ್ಸವವು ೩ ದಿನಗಳ ಕಾಲ ನಡೆಯಲಿದೆ.
- ಈ ಉತ್ಸವವು ಎಲ್ಲಾ ಎಂಟು ಈಶಾನ್ಯ ರಾಜ್ಯಗಳ (ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ, ಸಿಕ್ಕಿಂ) ಸಾಂಸ್ಕೃತಿಕ ಹಾಗೂ ಕರಕುಶಲ ಸಂಪತ್ತನ್ನು ಪ್ರದರ್ಶಿಸುತ್ತದೆ.
- ಈಶಾನ್ಯ ಭಾಗ ಮತ್ತು ದೇಶದ ಉಳಿದ ಭಾಗಗಳ ನಡುವೆ ಸಾಂಸ್ಕೃತಿಕ ಹಾಗೂ ಆರ್ಥಿಕ ಅಂತರವನ್ನು ಕಡಿಮೆ ಮಾಡುವ ಉದ್ದೇಶವಾಗಿದೆ.
- ಮಹೋತ್ಸವವು ಈಶಾನ್ಯಗಳನ್ನು ಅಭಿವೃದ್ಧಿಶೀಲ ರಾಜ್ಯಗಳನ್ನಾಗಿ ಮಾಡುವ ದೃಷ್ಠಿಕೋನದಲ್ಲಿ ಹಮ್ಮಿಕೊಳ್ಳಲಾಗಿದೆ.
- ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕರಕುಶಲ ವಸ್ತುಗಳ ಪ್ರದರ್ಶನಗಳು ಹಾಗೂ ತಾಂತ್ರಿಕ ಅವಧಿಗಳು ಆಯೋಜಿಸಲಾಗಿದೆ.
- ಖರೀದಿದಾರ-ಮಾರಾಟಗಾರರ ಸಭೆಗಳು ಮತ್ತು ಹೂಡಿಕೆ ಕೇಂದ್ರಿತ ಸಭೆಗಳೂ ನಡೆಯಲಿವೆ.
- ೩೨೦ ರೈತರು ಮತ್ತು ಕುಶಲಕರ್ಮಿಗಳು ತಮ್ಮ ಉತ್ಪನ್ನಗಳು ಮತ್ತು ಕಲೆಯನ್ನು ಪ್ರದರ್ಶಿಸುವ ಗ್ರಾಮೀಣ ಹಾತ್ ಬಜಾರ್ ಉತ್ಸವವು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ.
- ಈ ಉತ್ಸವವು ಈಶಾನ್ಯ ಭಾಗದ ಸಾಮರ್ಥ್ಯ ಮತ್ತು ಹಿರಿತನವನ್ನು ರಾಷ್ಟ್ರಕ್ಕೆ ತಲುಪಿಸಲು ಒಂದು ವೇದಿಕೆ ಆಗಿದೆ.
