ಒಡಿಶಾದ ಪುರಿಯಲ್ಲಿರುವ ಶ್ರೀ ಜಗನ್ನಾಥ ದೇವಾಲಯದ ನಾಲ್ಕು ದ್ವಾರಗಳನ್ನು ಭಕ್ತರಿಗಾಗಿ ಪುನಃ ತೆರೆಯಲಾಗಿದೆ. ಹೊಸದಾಗಿ ಚುನಾಯಿತವಾದ ಬಿಜೆಪಿ ಸರ್ಕಾರವು ಈ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ತಮ ಮೊದಲ ನಿರ್ಧಾರದಲ್ಲಿ ಈ ಆದೇಶ ನೀಡಿದ್ದು, ದೇವಾಲಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಕಾಳಜಿವಹಿಸಲು 500 ಕೋಟಿ ರೂಪಾಯಿಗಳ ವಿಶೇಷ ನಿಧಿಯನ್ನು ಘೊಷಿಸಿದ್ದಾರೆ. ಮಾಝಿ ಅವರು ತಮ ಸಂಪುಟ ಮಂತ್ರಿಗಳು ಹಾಗೂ ಪುರಿ ಸಂಸದ ಸಂಬಿತ್ ಪಾತ್ರ ಅವರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿ ಬಾಗಿಲು ತೆರೆಯುವ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡಿದ್ದಾರೆ.
BulletsIn
- ಶ್ರೀ ಜಗನ್ನಾಥ ದೇವಾಲಯದ ನಾಲ್ಕು ದ್ವಾರಗಳು ಪುನಃ ತೆರೆಯಲಾಯಿತು.
- ಹೊಸ ಬಿಜೆಪಿ ಸರ್ಕಾರದ ಮೊದಲ ನಿರ್ಧಾರ.
- ಮೋಹನ್ ಚರಣ್ ಮಾಝಿ ಆದೇಶ.
- 500 ಕೋಟಿ ರೂಪಾಯಿಗಳ ವಿಶೇಷ ನಿಧಿ ಘೋಷಣೆ.
- ದೇವಾಲಯದ ಬಾಗಿಲು ತೆರೆಯುವ ಪ್ರಕ್ರಿಯೆ ಮೇಲ್ವಿಚಾರಣೆ.
- ದೇವಾಲಯಕ್ಕೆ 12ನೇ ಶತಮಾನದ ಇತಿಹಾಸ.
- ಏಕಮಾತ್ರ ಒಂದು ದ್ವಾರದಿಂದ ಪ್ರವೇಶಕ್ಕೆ ಅವಕಾಶ ಇತ್ತು.
- ಜನಸಂದಣಿ ಮತ್ತು ಸಮಸ್ಯೆಗಳನ್ನು ನಿವಾರಿಸಲು ದ್ವಾರಗಳನ್ನು ತೆರೆಯಲಾಗಿದೆ.
- ಪುರಿ ಸಂಸದ ಸಂಬಿತ್ ಪಾತ್ರ ಹಾಜರಿದ್ದರು.
- ಒಡಿಶಾ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯ ಭರವಸೆ ಪೂರ್ಣ.
