ದೆಹಲಿ, 24ಜನವರಿ(ಹಿ.ಸ):
ಆ್ಯಂಕರ್ :
ಭಾರತ ಗಣತಂತ್ರಗೊಂಡು ೭೫ ವರ್ಷಗಳು ಸಂದ ಹಿನ್ನೆಲೆಯಲ್ಲಿ ಆಯೋಜನೆಗೊಂಡಿರುವ ’ಹಮಾರಾ ಸಂವಿಧಾನ್, ಹಮಾರ ಸಮ್ಮಾನ್’ ಅಭಿಯಾನಕ್ಕೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ದೆಹಲಿಯಲ್ಲಿ ಇಂದು ಚಾಲನೆ ನೀಡಲಿದ್ದಾರೆ. ವರ್ಷಪೂರ್ತಿ ನಡೆಯಲಿರುವ ಕಾರ್ಯಕ್ರಮವನ್ನು ಕಾನೂನು ಮತ್ತು ನ್ಯಾಯಾಂಗ ಸಚಿವಾಲಯ ಆಯೋಜಿಸಿದೆ. ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ತತ್ತ್ವಗಳಿಗೆ ಸಾಮೂಹಿಕ ಬದ್ಧತೆಯನ್ನು ಪುನರುಚ್ಚರಿಸುವ ಮತ್ತು ಹಂಚಿಕೆಯ ಮೌಲ್ಯಗಳನ್ನು ತಿಳಿಸುವ ಗುರಿಯನ್ನು ಹೊಂದಿದೆ. ಸಬ್ಕೋ ನ್ಯಾಯ್ -ಹರ್ ಘರ್ ನ್ಯಾಯ, ನವ ಭಾರತ್ ನವ ಸಂಕಲ್ಪ್ ಮತ್ತು ವಿಧಿ ಜಾಗೃತಿ ಅಭಿಯಾನವನ್ನು ಒಳಗೊಂಡಿವೆ ಎಂದು ಸಚಿವಾಲಯ ಹೇಳಿದೆ. ಇದೇ ವೇಳೆ ನ್ಯಾಯ ಸೇತು ಅಭಿಯಾನ ಆರಂಭಿಸಲಾಗುವುದು. ಇದು ಮಹತ್ವದ ಯೋಜನೆಯಾಗಿದ್ದು, ಕಾನೂನು ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಕಾನೂನು ಮಾಹಿತಿ, ಕಾನೂನು ಸಲಹೆ ಮತ್ತು ಕಾನೂನು ಸಹಾಯಕ್ಕಾಗಿ ಏಕೀಕೃತ ಕಾನೂನು ಇಂಟರ್ಫೇಸ್ ಅನ್ನು ಒದಗಿಸುತ್ತದೆ ಮತ್ತು ಇದರಿಂದಾಗಿ ಹೆಚ್ಚು ಅಂತರ್ಗತ ಮತ್ತು ನ್ಯಾಯಯುತ ಸಮಾಜವನ್ನು ಸಕ್ರಿಯಗೊಳಿಸುತ್ತದೆ. ಇದೇ ಸಂದರ್ಭದಲ್ಲಿ ಸಾಧನೆಯ ಕಿರುಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ.
ಹಿಂದೂಸ್ತಾನ್ ಸಮಾಚಾರ್
