ನವದೆಹಲಿ , 1 ನವೆಂಬರ್ (ಹಿ.ಸ):
ಆ್ಯಂಕರ್ :ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೂರು ದಿನಗಳ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ. ಈ ಭೇಟಿಯು ನಿರ್ಣಾಯಕ ಕಾರ್ಯಕ್ರಮಗಳ ಸರಣಿ ಮತ್ತು ರಾಜತಾಂತ್ರಿಕ ವಿನಿಮಯಗಳನ್ನು ಒಳಗೊಂಡಿರುತ್ತದೆ. ಭೇಟಿಯ ಸಮಯದಲ್ಲಿ, ಹಣಕಾಸು ಸಚಿವರು ಶ್ರೀಲಂಕಾಕ್ಕೆ ಭಾರತೀಯ ಮೂಲದ ತಮಿಳರ ಆಗಮನದ ೨೦೦ ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಶ್ರೀಲಂಕಾ ಸರ್ಕಾರ ಆಯೋಜಿಸಿರುವ ನಾಮ್ ೨೦೦ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮತ್ತು ಪ್ರಧಾನಿ ದಿನೇಶ್ ಗುಣವರ್ಧನೆ ಭಾಗವಹಿಸಲಿದ್ದಾರೆ. ’ಸಂಪರ್ಕವನ್ನು ಹೆಚ್ಚಿಸುವುದು: ಸಮೃದ್ಧಿಗಾಗಿ ಪಾಲುದಾರಿಕೆ’ ಎಂಬ ವಿಷಯದ ಮೇಲೆ ಕೊಲಂಬೊದಲ್ಲಿ ನಡೆಯಲಿರುವ ಭಾರತ – ಶ್ರೀಲಂಕಾ ವ್ಯಾಪಾರ ಶೃಂಗಸಭೆಯನ್ನುದ್ದೇಶಿಸಿಯೂ ಸಚಿವರು ಮಾತನಾಡಲಿದ್ದಾರೆ. ಶೃಂಗಸಭೆಯಲ್ಲಿ ದ್ವಿಪಕ್ಷೀಯ ಆರ್ಥಿಕ ಸಹಕಾರ ಮತ್ತು ವ್ಯಾಪಾರವನ್ನು ಉತ್ತೇಜಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ ಕಾರ್ಯತಂತ್ರದ ಮಹತ್ವವನ್ನು ಬಲಪಡಿಸುವ ಮೂಲಕ ಅವರು ಶ್ರೀಲಂಕಾದ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
