
ಹನೊಯ್, 16ಅಕ್ಟೋಬರ್ (ಹಿ.ಸ):
ಆ್ಯಂಕರ್ :
ವಿಯೆಟ್ನಾಂ ಮತ್ತು ಸಿಂಗಾಪುರಗಳಿಗೆ ೬ ದಿನಗಳ ಭೇಟಿಗಾಗಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಡಾ. ಎಸ್. ಜೈಶಂಕರ್ ಹನೊಯ್ ತಲುಪಿದ್ದಾರೆ. ವಿಯೆಟ್ನಾಂ ವಿದೇಶಾಂಗ ವ್ಯವಹಾರಗಳ ಸಚಿವರ ಆಹ್ವಾನದ ಮೇರೆಗೆ ಜೈಶಂಕರ್ ಇದೇ ಬುಧವಾರದವರೆಗೆ ವಿಯಟ್ನಾಂಗೆ ಅಧಿಕೃತ ಭೇಟಿ ಕೈಗೊಂಡಿದ್ದು, ಇಂದು ಆರ್ಥಿಕತೆ, ವ್ಯಾಪಾರ, ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರ ಕುರಿತ ೧೮ನೇ ಜಂಟಿ ಆಯೋಗದ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಇಂದು ಹನೊಯ್ ತಲುಪಿದ ಬಳಿಕ ಅವರು, ಐತಿಹಾಸಿಕ ಟ್ರಾನ್ ಕ್ವಾಕ್ ಪಗೋಡಾಗೆ ಭೇಟಿ ನೀಡಿದರು. ಇಲ್ಲಿನ ಬೋಧಿವೃಕ್ಷ ಭಾರತ ಮತ್ತು ವಿಯೆಟ್ನಾಂ ನಡುವಣ ಅನೇಕ ವರ್ಷಗಳ ಬಾಂಧವ್ಯದ ಪ್ರತೀಕವಾಗಿದೆ ಎಂದು ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇಲ್ಲಿನ ಬೋಧಿವೃಕ್ಷವನ್ನು ಅಂದಿನ ಅಧ್ಯಕ್ಷ ಹೊ ಚಿ ಮಿನ್ ಅವರಿಗೆ ಅಂದಿನ ಭಾರತದ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ೧೯೫೯ರಲ್ಲಿ ಉಡುಗೊರೆಯಾಗಿ ನೀಡಿದ್ದರು ಎಂದೂ ಜೈಶಂಕರ್ ಉಲ್ಲೇಖಿಸಿದ್ದಾರೆ. ವಿಯೆಟ್ನಾಂ ಭೇಟಿ ಬಳಿಕ ೧೯ ರಂದು ಸಚಿವರು ಸಿಂಗಾಪುರಕ್ಕೆ ೨ ದಿನಗಳ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ. ಉಭಯ ದೇಶಗಳ ಐತಿಹಾಸಿಕ ಸಂಬಂಧವನ್ನು ೨೦೧೫ರಲ್ಲಿ ತಾಂತ್ರಿಕ ಪಾಲುದಾರಿಕೆ ಮಟ್ಟಕ್ಕೆ ಕೊಂಡೊಯ್ಯಲಾಗಿತ್ತು. ಈ ವರ್ಷ ಎರಡೂ ದೇಶಗಳ ಸಚಿವರು ಜಿ-೨೦ ಶೃಂಗಸಭೆಯ ನೇಪಥ್ಯದಲ್ಲಿ ಅನೇಕ ಸಚಿವ ಮಟ್ಟದ ಮಾತುಕತೆ ನಡೆಸಿವೆ ಎಂದು ಸಚಿವಾಲಯ ತಿಳಿಸಿದೆ.
<><><><>
ಹಿಂದೂಸ್ತಾನ್ ಸಮಾಚಾರ್
