• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > National > ಬುದ್ಧನ ಅವಶೇಷ ನಾಗರಿಕತೆಯ ಜೀವಂತ ಉದಾಹರಣೆ : ಪ್ರಧಾನಿ ಮೋದಿ
National

ಬುದ್ಧನ ಅವಶೇಷ ನಾಗರಿಕತೆಯ ಜೀವಂತ ಉದಾಹರಣೆ : ಪ್ರಧಾನಿ ಮೋದಿ

CliQ INDIA
Last updated: January 4, 2026 7:46 am
CliQ INDIA
Share
5 Min Read
SHARE

ನವದೆಹಲಿ, 03 ಜನವರಿ (ಹಿ.ಸ.) :

ಆ್ಯಂಕರ್ : ಭಗವಾನ್ ಬುದ್ಧರ ಪವಿತ್ರ ಅವಶೇಷಗಳು ಭಾರತಕ್ಕೆ ಕೇವಲ ಐತಿಹಾಸಿಕ ವಸ್ತುಗಳು ಅಥವಾ ಮ್ಯೂಸಿಯಂನ ಕಲಾಕೃತಿಗಳಲ್ಲ, ಅವು ನಮ್ಮ ನಾಗರಿಕತೆಯ ಜೀವಂತ, ಪವಿತ್ರ ಮತ್ತು ಅಟುಟವಾದ ಧಾರೋಹರೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬುದ್ಧನ ಜ್ಞಾನ ಮತ್ತು ಮಾರ್ಗವು ಭಾರತಕ್ಕೆ ಮಾತ್ರ ಸೀಮಿತವಲ್ಲ; ಅದು ಸಂಪೂರ್ಣ ಮಾನವಕೂಲಕ್ಕೆ ಸೇರಿದ ಶಾಶ್ವತ ಬೆಳಕು ಎಂದು ಅವರು ಹೇಳಿದರು.

ಶನಿವಾರ ನವದೆಹಲಿಯ ರಾಯ್ ಪಿಥೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ಭಗವಾನ್ ಬುದ್ಧನ ಪವಿತ್ರ ಪಿಪ್ರಹ್ವಾ ಅವಶೇಷಗಳ ಭವ್ಯ ಅಂತರರಾಷ್ಟ್ರೀಯ ಪ್ರದರ್ಶನವನ್ನು ಪ್ರಧಾನಿ ಉದ್ಘಾಟಿಸಿದರು.

‘ದಿ ಲೈಟ್ ಅಂಡ್ ದ ಲೋಟಸ್: ರೆಲಿಕ್ಸ್ ಆಫ್ ದ ಅವೇಕನ್ಡ್ ವನ್’ ಎಂಬ ಶೀರ್ಷಿಕೆಯ ಈ ಪ್ರದರ್ಶನದಲ್ಲಿ 1898ರಲ್ಲಿ ಪತ್ತೆಯಾದ ಬುದ್ಧಕಾಲೀನ ಅವಶೇಷಗಳು ಮತ್ತು ಕಲಾಕೃತಿಗಳನ್ನು ಶತಮಾನಕ್ಕೂ ಹೆಚ್ಚು ಕಾಲದ ನಂತರ ಮೊದಲ ಬಾರಿಗೆ ಇಷ್ಟು ವಿಶಾಲ ಹಾಗೂ ಭವ್ಯ ರೂಪದಲ್ಲಿ ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲಾಗಿದೆ.

ಸಮಾರಂಭದ ಆರಂಭದಲ್ಲಿ ಥಾಯ್ಲೆಂಡ್, ವಿಯೆಟ್ನಾಂ, ಮಂಗೋಲಿಯಾ, ರಷ್ಯಾ, ಲಂಕಾ, ನೆಪಾಳ, ಜಪಾನ್ ಸೇರಿದಂತೆ ಹಲವು ದೇಶಗಳಿಂದ ಆಗಮಿಸಿದ ಪ್ರತಿನಿಧಿಗಳನ್ನು ಸ್ವಾಗತಿಸಿದ ಪ್ರಧಾನಿ, 125 ವರ್ಷಗಳ ದೀರ್ಘ ನಿರೀಕ್ಷೆಯ ಬಳಿಕ ಬುದ್ಧನ ಪವಿತ್ರ ಚಿಹ್ನೆಗಳು ಭಾರತ ಭೂಮಿಗೆ ಮರಳಿವೆ ಎಂದು ಹೇಳಿದರು.

ಈ ಅವಶೇಷಗಳ ವಾಪಸ್ಸು ಭಾರತದ ಸಾಂಸ್ಕೃತಿಕ ಸಂಪ್ರಭುತ್ವದ ಪುನರ್ ಸ್ಥಾಪನೆಯ ಸಂಕೇತವಾಗಿದ್ದು, ವಸಾಹತುಶಾಹಿ ಕಾಲದಲ್ಲಿ ದೇಶದ ಹೊರಗೆ ಕರೆದೊಯ್ಯಲಾದ ನಮ್ಮ ಪರಂಪರೆಯನ್ನು ಗೌರವ ಮತ್ತು ಸಂರಕ್ಷಣೆಯೊಂದಿಗೆ ಮರಳಿ ತರುವ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.

ರಾಯ್ ಪಿಥೋರಾವನ್ನು ಭಾರತದ ವೈಭವಶಾಲಿ ಭೂತಕಾಲ ಮತ್ತು ಆಧ್ಯಾತ್ಮಿಕ ಪುನರ್ಜಾಗರಣದ ಸಂಗಮ ಸ್ಥಳವೆಂದು ವರ್ಣಿಸಿದ ಪ್ರಧಾನಿ, ಬುದ್ಧನ ಅವಶೇಷಗಳ ಸಾನ್ನಿಧ್ಯವು ಆ ಸ್ಥಳವನ್ನೂ ಅಲ್ಲಿನ ಪ್ರತಿಯೊಬ್ಬರನ್ನೂ ಪಾವನಗೊಳಿಸುತ್ತದೆ ಎಂದರು.

ಈ ಅವಶೇಷಗಳ ಸಾರ್ವಜನಿಕ ಹರಾಜನ್ನು ತಡೆಯಲು ಮತ್ತು ಅವು ಭಾರತಕ್ಕೆ ಮರಳಲು ಮಹತ್ವದ ಪಾತ್ರ ವಹಿಸಿದ ಗೋಡ್ರೇಜ್ ಸಮೂಹಕ್ಕೆ ವಿಶೇಷ ಕೃತಜ್ಞತೆ ಸಲ್ಲಿಸಿದರು.

ಗುಲಾಮಗಿರಿ ಕೇವಲ ರಾಜಕೀಯ ಅಥವಾ ಆರ್ಥಿಕ ಮಟ್ಟಕ್ಕೆ ಸೀಮಿತವಲ್ಲ; ಅದು ನಾಗರಿಕತೆಯ ಸ್ಮೃತಿಗಳನ್ನೂ ಪರಂಪರೆಯನ್ನೂ ಮಸುಕಾಗಿಸುತ್ತದೆ ಎಂದು ಮೋದಿ ಹೇಳಿದರು.

ವಸಾಹತುಶಾಹಿ ಕಾಲದಲ್ಲಿ ಪಿಪ್ರಹ್ವಾ ಅವಶೇಷಗಳನ್ನು ಹಳೆಯ, ನಿರ್ಜೀವ ವಸ್ತುಗಳೆಂದು ಭಾವಿಸಿ ದೇಶದ ಹೊರಗೆ ಕರೆದೊಯ್ಯಲಾಯಿತು. ಆದರೆ ಭಾರತಕ್ಕೆ ಅವು ಪೂಜ್ಯ, ಪವಿತ್ರ ಹಾಗೂ ಬುದ್ಧನ ಜೀವನದರ್ಶನದ ಜೀವಂತ ಸಾಕ್ಷ್ಯಗಳಾಗಿವೆ. ಅವುಗಳನ್ನು ಕರೆದೊಯ್ದವರಿಗೂ ಅವರ ವಂಶಜರಿಗೂ ಅವು ಕೇವಲ ಸಂಗ್ರಹದ ವಸ್ತುಗಳಾಗಿದ್ದರೂ, ಭಾರತವು ಸಾರ್ವಜನಿಕ ಹರಾಜಿಗೆ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಭಾರತವು ಈ ಅವಶೇಷಗಳ ಸಂರಕ್ಷಕ ಮಾತ್ರವಲ್ಲ, ಬುದ್ಧ ಪರಂಪರೆಯ ಜೀವಂತ ವಾಹಕವೂ ಹೌದು ಎಂದು ಅವರು ಹೇಳಿದರು.

ವಿದೇಶಿ ಪ್ರದರ್ಶನಗಳ ಅನುಭವವನ್ನು ವಿವರಿಸಿದ ಪ್ರಧಾನಿ, ಥಾಯ್ಲೆಂಡ್‌ನಲ್ಲಿ ತಿಂಗಳಿಗೂ ಕಡಿಮೆ ಅವಧಿಯಲ್ಲಿ 40 ಲಕ್ಷಕ್ಕೂ ಹೆಚ್ಚು ಭಕ್ತರು ಅವಶೇಷಗಳ ದರ್ಶನ ಪಡೆದಿದ್ದಾರೆ ಎಂದರು.

ವಿಯೆಟ್ನಾಂನಲ್ಲಿ ಭಕ್ತರ ಬೇಡಿಕೆಯಿಂದ ಪ್ರದರ್ಶನಾವಧಿಯನ್ನು ವಿಸ್ತರಿಸಬೇಕಾಯಿತು; ಅಲ್ಲಿ ಒಂಬತ್ತು ನಗರಗಳಲ್ಲಿ ಸುಮಾರು 1.75 ಕೋಟಿ ಜನರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮಂಗೋಲಿಯಾದ ಗಂಡನ್ ಮಠದ ಮುಂದೆ ಸಾವಿರಾರು ಜನರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತಿದ್ದು, ಅನೇಕರು ಬುದ್ಧನ ಭೂಮಿಯಿಂದ ಬಂದ ಭಾರತೀಯ ಪ್ರತಿನಿಧಿಗಳನ್ನು ಸ್ಪರ್ಶಿಸಲು ಪ್ರಯತ್ನಿಸಿದರು. ರಷ್ಯಾದ ಕಾಲ್ಮಿಕಿಯಾ ಪ್ರದೇಶದಲ್ಲಿ ಒಂದೇ ವಾರದಲ್ಲಿ 1.5 ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ ಪಡೆದಿದ್ದು, ಅದು ಆ ಪ್ರದೇಶದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಗೆ ಸಮಾನವಾಗಿದೆ. ಈ ಎಲ್ಲ ಸಂದರ್ಭಗಳಲ್ಲಿ ಸಾಮಾನ್ಯ ನಾಗರಿಕರಿಂದ ರಾಷ್ಟ್ರಾಧ್ಯಕ್ಷರ ತನಕ ಕಂಡುಬಂದ ಶ್ರದ್ಧೆ, ಭಗವಾನ್ ಬುದ್ಧ ಎಲ್ಲರಿಗೂ ಸೇರಿದವರು ಎಂಬುದನ್ನು ತೋರಿಸುತ್ತದೆ ಎಂದರು.

ಬುದ್ಧ ಪರಂಪರೆಯೊಂದಿಗೆ ತನ್ನ ವೈಯಕ್ತಿಕ ಸಂಬಂಧವನ್ನು ಸ್ಮರಿಸಿದ ಪ್ರಧಾನಿ, ತನ್ನ ಜನ್ಮಸ್ಥಳ ವಡ್ನಗರ ಪ್ರಾಚೀನ ಕಾಲದಲ್ಲಿ ಬೌದ್ಧ ಶಿಕ್ಷಣದ ಪ್ರಮುಖ ಕೇಂದ್ರವಾಗಿತ್ತು ಎಂದರು. ಸಾರನಾಥ್ ತನ್ನ ಕಾರ್ಯಭೂಮಿ; ಅಲ್ಲಿ ಬುದ್ಧ ಮೊದಲ ಉಪದೇಶ ನೀಡಿದರು ಎಂದು ಹೇಳಿದರು.

ಪ್ರಧಾನಿ ಆಗುವ ಮೊದಲು ಮತ್ತು ನಂತರವೂ ಅನೇಕ ಬೌದ್ಧ ತೀರ್ಥಕ್ಷೇತ್ರಗಳನ್ನು ಯಾತ್ರಿಕನಾಗಿ ಭೇಟಿಯಾದ ಅನುಭವವನ್ನು ಹಂಚಿಕೊಂಡ ಅವರು, ಲುಂಬಿನಿಯ ಮಾಯಾದೇವಿ ಮಂದಿರ, ಜಪಾನ್‌ನ ತೋಜಿ ಹಾಗೂ ಕಿಂಕಾಕು-ಜಿ, ಚೀನಾದ ವೈಲ್ಡ್ ಗೂಸ್ ಪಗೋಡಾ, ಲಂಕಾದ ಜಯ ಮಹಾಬೋಧಿ, ಥಾಯ್ಲೆಂಡ್‌ನ ವಾಟ್ ಫೋ ಮತ್ತು ಸಿಂಗಾಪುರದ ಬುದ್ಧ ಟೂತ್ ರೆಲಿಕ್ ಮಂದಿರಕ್ಕೆ ಭೇಟಿ ನೀಡಿದುದನ್ನು ಸ್ಮರಿಸಿದರು.

ಚೀನಾ, ಜಪಾನ್, ಕೊರಿಯಾ ಮತ್ತು ಮಂಗೋಲಿಯಾದಲ್ಲಿ ಬೋಧಿ ವೃಕ್ಷದ ಸಸಿಗಳನ್ನು ಉಡುಗೊರೆಯಾಗಿ ನೀಡಿದ್ದು, ಅಣು ದುರಂತದ ಸಾಕ್ಷಿಯಾದ ಹಿರೋಷಿಮಾದಂತಹ ನಗರಗಳಲ್ಲಿ ಬೋಧಿ ವೃಕ್ಷ ಮಾನವತೆಗೆ ಶಾಂತಿಯ ಸಂದೇಶವಾಗಿದೆ ಎಂದರು.

ನೆಪಾಳದಲ್ಲಿ 2015ರ ಭೀಕರ ಭೂಕಂಪದಿಂದ ಹಾನಿಗೊಂಡ ಪ್ರಾಚೀನ ಸ್ತೂಪದ ಪುನರ್ ನಿರ್ಮಾಣಕ್ಕೆ ಭಾರತ ನೆರವು ನೀಡಿದೆ. ಮ್ಯಾನ್ಮಾರ್‌ನ ಬಾಗನ್ ಭೂಕಂಪದ ಬಳಿಕ 11ಕ್ಕೂ ಹೆಚ್ಚು ಪಗೋಡಗಳ ಸಂರಕ್ಷಣಾ ಕಾರ್ಯವನ್ನು ಭಾರತ ಕೈಗೊಂಡಿದೆ. ವಡ್ನಗರದಲ್ಲಿ ಸಾವಿರಾರು ಬೌದ್ಧ ಅವಶೇಷಗಳನ್ನು ಸಂರಕ್ಷಿಸಿ, 2,500 ವರ್ಷಗಳ ನಾಗರಿಕತೆಯ ಪಯಣವನ್ನು ಪ್ರದರ್ಶಿಸುವ ಆಧುನಿಕ ಅನುಭವಾತ್ಮಕ ಮ್ಯೂಸಿಯಂ ನಿರ್ಮಿಸಲಾಗಿದೆ. ಜಮ್ಮು–ಕಾಶ್ಮೀರದ ಬರಾಮುಳಾದಲ್ಲಿ ಇತ್ತೀಚೆಗೆ ಪತ್ತೆಯಾದ ಬೌದ್ಧ ಕಾಲೀನ ಸ್ಥಳದ ಸಂರಕ್ಷಣೆಯಿಗೂ ವೇಗ ನೀಡಲಾಗಿದೆ ಎಂದು ಅವರು ತಿಳಿಸಿದರು.

ಭಾರತ ಬೌದ್ಧ ಪರಂಪರೆಯನ್ನು ಆಧುನಿಕತೆಯೊಂದಿಗೆ ಜೋಡಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದು ಮೋದಿ ಹೇಳಿದರು.

ಬೋಧಗಯಾದಲ್ಲಿ ಆಧುನಿಕ ಕನ್‌ವೆನ್ಷನ್ ಮತ್ತು ಧ್ಯಾನ ಕೇಂದ್ರ, ಸಾರನಾಥ್‌ನ ಧಮೇಕ್ ಸ್ತೂಪದಲ್ಲಿ ಲೈಟ್ ಅಂಡ್ ಸೌಂಡ್ ಶೋ, ಶ್ರಾವಸ್ತಿ, ಕಪಿಲವಸ್ತು ಮತ್ತು ಕುಶೀನಗರದಲ್ಲಿ ಆಧುನಿಕ ಸೌಲಭ್ಯಗಳು, ತೆಲಂಗಾಣದ ನಲ್ಗೊಂಡಾದಲ್ಲಿ ಡಿಜಿಟಲ್ ಅನುಭವ ಕೇಂದ್ರ ಹಾಗೂ ಸಾಂಚಿ, ನಾಗಾರ್ಜುನ ಸಾಗರ್ ಮತ್ತು ಅಮರಾವತಿಯಲ್ಲಿ ತೀರ್ಥಯಾತ್ರಿಕರಿಗಾಗಿ ಹೊಸ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬೌದ್ಧ ಸರ್ಕ್ಯೂಟ್ ಅಭಿವೃದ್ಧಿಯು ತೀರ್ಥಯಾತ್ರಿಗಳಿಗೆ ಆಳವಾದ ಆಧ್ಯಾತ್ಮಿಕ ಅನುಭವ ನೀಡುವ ಉದ್ದೇಶ ಹೊಂದಿದೆ ಎಂದರು.

ಬುದ್ಧನ ಮೂಲ ಉಪದೇಶಗಳು ಪಾಲಿ ಭಾಷೆಯಲ್ಲಿ ಇದ್ದು, ಅವುಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಭಾರತದ ಗುರಿಯಾಗಿದೆ. ಪಾಲಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವುದರಿಂದ ಬುದ್ಧ ಧಮ್ಮವನ್ನು ಮೂಲರೂಪದಲ್ಲೇ ಅರ್ಥಮಾಡಿಕೊಳ್ಳಲು ಹಾಗೂ ಸಂಶೋಧನೆಗೆ ಉತ್ತೇಜನ ಸಿಗಲಿದೆ. ‘ಅತ್ತ ದೀಪೋ ಭವ’ ಎಂಬ ಬುದ್ಧನ ಸಂದೇಶ ಆತ್ಮಗೌರವ ಮತ್ತು ಆತ್ಮನಿರ್ಭರತೆಯ ಪ್ರತೀಕವಾಗಿದೆ. ಸಂಘರ್ಷಗಳ ಬದಲು ಏಕತೆ ಮತ್ತು ಕರුණೆಯ ಮೂಲಕ ಜಾಗತಿಕ ಕಲ್ಯಾಣವನ್ನು ಸಾಧಿಸುವುದು ಭಾರತದ ತತ್ವವಾಗಿದೆ ಎಂದು ಪ್ರಧಾನಿ ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕಿರಣ್ ರಿಜಿಜು, ರಾಮದಾಸ್ ಅಠಾವಲೆ, ರಾವ್ ಇಂದ್ರಜೀತ್ ಸಿಂಗ್, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಸೇರಿದಂತೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು, ವಿವಿಧ ದೇಶಗಳಿಂದ ಆಗಮಿಸಿದ ಬೌದ್ಧ ಭಿಕ್ಷುಗಳು, ಧರ್ಮಗುರುಗಳು ಹಾಗೂ ಸಾಂಸ್ಕೃತಿಕ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

You Might Also Like

ಪೌಷ್ಟಿಕ ಆಹಾರ ವಿತರಣೆಗೆ ಮಿಲೆಟ್ಸ್ ಖರೀದಿ ಹೆಚ್ಚಳ : ಜೋಶಿ | BulletsIn
ಭಾರತೀಯ ರೈಲ್ವೆ ಟಿಕೆಟ್ ನಿಯಮಗಳು 2026: ಹೊಸ ರದ್ದತಿ, ಮರುಪಾವತಿ ಮತ್ತು ಬೋರ್ಡಿಂಗ್ ಬದಲಾವಣೆಗಳು ಘೋಷಣೆ
ಸಮರ್ಲಕೋಟದಲ್ಲಿ ದುರಂತ: ಮಾರಣಾಂತಿಕ ಪಟಾಕಿ ಕಾರ್ಖಾನೆ ಸ್ಫೋಟವು ಕೈಗಾರಿಕಾ ಸುರಕ್ಷತೆಯ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ
ಹರಿಯಾಣ : ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಮರಣೋತ್ತರ ಪರೀಕ್ಷೆ ಪೂರ್ಣ
ಚುನಾವಣಾ ಆಯೋಗ ದಕ್ಷಿಣ ಭಾರತ ರಾಜ್ಯಗಳಿಗೆ ಭೇಟಿ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ನಾಳೆ ಸಂಜೆ ಗವಿಮಠದ ಲಘು ರಥೋತ್ಸವ
Next Article ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ ಪದಗ್ರಹಣ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?