• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > National > ಅಸ್ವಸ್ಥತೆಯಲ್ಲಿಯೂ ‘ರಾಷ್ಟ್ರಧರ್ಮ’ಕ್ಕೆ ಅಟಲ್ ಜಿಯವರ ಸಮರ್ಪಣೆ
National

ಅಸ್ವಸ್ಥತೆಯಲ್ಲಿಯೂ ‘ರಾಷ್ಟ್ರಧರ್ಮ’ಕ್ಕೆ ಅಟಲ್ ಜಿಯವರ ಸಮರ್ಪಣೆ

CliQ INDIA
Last updated: December 25, 2025 1:20 am
CliQ INDIA
Share
2 Min Read
SHARE

ಲಖನೌ, 24 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭಾರತದ ರಾಜಕೀಯ ಹಾಗೂ ಸಾಂಸ್ಕೃತಿಕ ಜೀವನದಲ್ಲಿ ಅಜರಾಮರವಾಗಿ ಉಳಿದಿರುವ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನದ ಅಪರೂಪದ ಅಧ್ಯಾಯವೊಂದನ್ನು ‘ರಾಷ್ಟ್ರಧರ್ಮ’ ಪತ್ರಿಕೆಯ ಇತಿಹಾಸ ಹೇಳುತ್ತದೆ. ರಾಷ್ಟ್ರ ಸೇವೆಯೇ ಪರಮ ಧರ್ಮ ಎಂಬ ನಂಬಿಕೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಅಟಲ್ ಜಿ, ಅಸ್ವಸ್ಥತೆಯಲ್ಲಿಯೂ ‘ರಾಷ್ಟ್ರಧರ್ಮ’ ವಿಶೇಷಾಂಕದ ಲೋಕಾರ್ಪಣೆಗೆ ಸಮ್ಮತಿಸಿದ್ದು, ಅವರ ಸಮರ್ಪಣೆಯ ಜೀವಂತ ಸಾಕ್ಷಿಯಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಆ ಕಾಲದ ಪ್ರಾಂತ ಪ್ರಚಾರಕರಾಗಿದ್ದ ಭೌರಾವ್ ದೇವರಸ್ ಅವರು ಅಟಲ್ ಜಿಯವರನ್ನು ಹರ್ದೋಯಿ ಜಿಲ್ಲೆಯ ಸಂದೀಲಾ ತಹಸೀಲಿಗೆ ಪ್ರಚಾರಕರಾಗಿ ಕಳುಹಿಸಿದ್ದರು. 1947ರ ಆಗಸ್ಟ್‌ನಲ್ಲಿ ಭೌರಾವ್ ದೇವರಸ್ ಮತ್ತು ಸಹ ಪ್ರಾಂತ ಪ್ರಚಾರಕರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಮನಸ್ಸಿನಲ್ಲಿ ಭವಿಷ್ಯದ ದಿಕ್ಕು ತೋರಿಸುವ ಸಾಂಸ್ಕೃತಿಕ ಪತ್ರಿಕೆಯ ಅಗತ್ಯ ಮೂಡಿತು. ಇದರ ಫಲವಾಗಿ ‘ರಾಷ್ಟ್ರಧರ್ಮ’ ಪತ್ರಿಕೆಯ ಪ್ರಕಟಣೆಗಾಗಿ ಯೋಜನೆ ರೂಪುಗೊಂಡಿತು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಮಹಾಮಂತ್ರಿ ಡಾ. ಪವನ್ ಪುತ್ರ ಬಾದಲ್ ಅವರು ಮಾಹಿತಿ ನೀಡುತ್ತಾ, 1947ರ ಆಗಸ್ಟ್ 31ರಂದು ಶ್ರಾವಣಿ ಪೂರ್ಣಿಮೆ (ರಕ್ಷಾಬಂಧನ) ಎಂಬ ಪವಿತ್ರ ದಿನದಂದು ‘ರಾಷ್ಟ್ರಧರ್ಮ’ದ ಮೊದಲ ಸಂಚಿಕೆ ಪ್ರಕಟವಾಯಿತು ಎಂದು ತಿಳಿಸಿದ್ದಾರೆ. ಮೊದಲ ಪುಟದಲ್ಲೇ ಅಟಲ್ ಜಿಯವರ ಪ್ರಸಿದ್ಧ ಕವನ “ಹಿಂದೂ ತನು-ಮನ ಹಿಂದೂ ಜೀವನ, ರಗ-ರಗ ಹಿಂದೂ ಮೆರಾ ಪರಿಚಯ” ಪ್ರಕಟವಾಗಿತ್ತು. ಅದೇ ಸಂಚಿಕೆಯಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಚಿಂತನಾ ಲೇಖನ ‘ಚಿತಿ’ ಕೂಡ ಪ್ರಕಟಗೊಂಡಿತ್ತು.

ಮೊದಲ ಸಂಚಿಕೆಯ ಮೂರು ಸಾವಿರ ಪ್ರತಿಗಳು ಕ್ಷಿಪ್ರವಾಗಿ ಮಾರಾಟವಾದವು. ಎರಡನೇ ಮುದ್ರಣಕ್ಕಾಗಿ ಮತ್ತೆ 500 ಪ್ರತಿಗಳ ಆದೇಶ ನೀಡಲಾಯಿತು. ಕ್ರಮೇಣ ಪತ್ರಿಕೆಯ ಪ್ರಸಾರ ವಿಸ್ತರಿಸಿ, ಎರಡನೇ ಸಂಚಿಕೆ 4,000 ಪ್ರತಿಗಳಿಗೂ, ಮೂರನೇ ಸಂಚಿಕೆ 12,000 ಪ್ರತಿಗಳಿಗೂ ತಲುಪಿತು. ಯುವ ಸಂಪಾದಕರಾಗಿದ್ದ ಅಟಲ್ ಜಿಯವರ ಹೆಸರು ದೇಶಾದ್ಯಂತ ಪ್ರಸಿದ್ಧಿಯಾಯಿತು.

ಆ ದಿನಗಳಲ್ಲಿ ಪತ್ರಿಕೆ ಪ್ರಕಟಿಸುವುದು ಸುಲಭದ ಕೆಲಸವಾಗಿರಲಿಲ್ಲ. ಕೈಯಿಂದಲೇ ಮುದ್ರಣ ಯಂತ್ರಗಳನ್ನು ಚಲಾಯಿಸಬೇಕಾಗುತ್ತಿತ್ತು. ಕರ್ಮಚಾರಿಗಳು ದಣಿದಾಗ ಅಟಲ್ ಜಿ ಮತ್ತು ದೀನದಯಾಳ್ ಉಪಾಧ್ಯಾಯರು ಸ್ವತಃ ಯಂತ್ರಗಳನ್ನು ಕೈಯಿಂದಲೇ ಚಲಾಯಿಸುತ್ತಿದ್ದರು. ಅಲ್ಲದೆ, ಅಟಲ್ ಜಿಯವರೇ ಸೈಕಲ್ ಮೇಲೆ ‘ರಾಷ್ಟ್ರಧರ್ಮ’ ಪತ್ರಿಕೆಯ ಕಟ್ಟುಗಳನ್ನು ಹೊತ್ತು ಚಾರಬಾಗ್ ರೈಲು ನಿಲ್ದಾಣ ಹಾಗೂ ಲಖನೌನ ಸ್ಥಳೀಯ ಏಜೆಂಟ್‌ಗಳಿಗೆ ತಲುಪಿಸುತ್ತಿದ್ದರು.

ನಂತರ ಅಟಲ್ ಜಿಯವರು ದೇಶದ ಜನಮನದಲ್ಲಿ ಅಚಲ ಸ್ಥಾನ ಪಡೆದರು. ಮೂರು ಬಾರಿ ದೇಶದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದರು. ‘ರಾಷ್ಟ್ರಧರ್ಮ’ದ ವ್ಯವಸ್ಥಾಪಕ ಸಂಪಾದಕರಾಗಿದ್ದ ಡಾ. ಬಾದಲ್ ಅವರು ತಿಳಿಸಿದಂತೆ, 2007ರಲ್ಲಿ ‘ಜನಸಂಘ ಮತ್ತು ಬಿಜೆಪಿ ವಿಶೇಷಾಂಕ’ ಪ್ರಕಟಿಸಲು ತೀರ್ಮಾನಿಸಿದಾಗ, ಲೋಕಾರ್ಪಣೆಗೆ ಅಟಲ್ ಜಿಯವರನ್ನು ಆಹ್ವಾನಿಸಲು ದೆಹಲಿಗೆ ಭೇಟಿ ನೀಡಲಾಯಿತು. ಆರೋಗ್ಯ ಕಾರಣದಿಂದ ಲಖನೌಗೆ ಬರಲು ಸಾಧ್ಯವಿಲ್ಲವೆಂದು ಅವರು ತಿಳಿಸಿದಾಗ, ಕಾರ್ಯಕ್ರಮವನ್ನು ದೆಹಲಿಯಲ್ಲೇ ನಡೆಸುವ ನಿರ್ಧಾರವಾಯಿತು.

ಅಂತಿಮವಾಗಿ 2007ರ ಆಗಸ್ಟ್ 7ರಂದು ನವದೆಹಲಿಯಲ್ಲಿ ಅಟಲ್ ಜಿ ಹಾಗೂ ಎಲ್.ಕೆ. ಅಡ್ವಾಣಿ ಅವರಿಂದ ಎರಡೂ ವಿಶೇಷಾಂಕಗಳ ಲೋಕಾರ್ಪಣೆ ನೆರವೇರಿತು. ಅಟಲ್ ಜಿಯವರಂತಹ ಮಹಾನ್ ವಾಗ್ಮಿಯ ಸಮ್ಮುಖದಲ್ಲಿ ಕಾರ್ಯಕ್ರಮ ನಿರ್ವಹಿಸುವ ಆಶೀರ್ವಾದವೂ ದೊರಕಿತು.

ವಿಧಿಯ ವಿಚಿತ್ರತೆಯಂತೆ, 1947ರ ಆಗಸ್ಟ್‌ನಲ್ಲಿ ‘ರಾಷ್ಟ್ರಧರ್ಮ’ದಿಂದ ಆರಂಭವಾದ ಅಟಲ್ ಜಿಯವರ ಸಾಮಾಜಿಕ ಪಯಣ, 2007ರ ಆಗಸ್ಟ್ 7ರಂದು ಅದೇ ‘ರಾಷ್ಟ್ರಧರ್ಮ’ದ ಜನಸಂಘ–ಬಿಜೆಪಿ ವಿಶೇಷಾಂಕದ ಲೋಕಾರ್ಪಣೆಯೊಂದಿಗೆ ಅಂತ್ಯಗೊಂಡಿತು. ಅದೇ ಅಟಲ್ ಬಿಹಾರಿ ವಾಜಪೇಯಿ ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

You Might Also Like

ಮಾಜಿ ಸಚಿವ ಸೇರಿ 8 ಮಂದಿ ವಿರುದ್ಧ ಕೇಸ್
ಆಂಧ್ರ ಪ್ರದೇಶ, ತಮಿಳುನಾಡುಗಳಿಗೆ ಪ್ರಧಾನಿ ಭೇಟಿ
ಇಂಧನ ಬಿಕ್ಕಟ್ಟು: ಆತಂಕ ಬೇಡ ಎಂದ ಪ್ರಧಾನಿ ಮೋದಿ
ಪ್ರತಿ ಪಕ್ಷದ ಉಪರಾಷ್ಟ್ರಪತಿ ಅಭ್ಯರ್ಥಿ ಸುದರ್ಶನ್ ರೆಡ್ಡಿ ಲಕ್ನೋ ಭೇಟಿ
ವೀಕ್ಷಕರನ್ನು ನೇಮಿಸಿದ ಚುನಾವಣಾ ಆಯೋಗ – Hindusthan Samachar Kannada

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ದೇವದುರ್ಗದಲ್ಲಿ ವಂದೇ ಮಾತರಂ ಗೀತೆಯ ಛಾಯಚಿತ್ರ ಪ್ರದರ್ಶನ
Next Article ಸರ್ಕಾರಿ ಬಾಲಮಂದಿರ, ದತ್ತು ಸ್ವೀಕಾರ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳ ದಿಢೀರ್ ಭೇಟಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?