ಪುಣೆ, 18 ಡಿಸೆಂಬರ್(ಹಿ.ಸ):
ಆ್ಯಂಕರ್ :
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ನನಗಿನ್ನೂ ವಯಸ್ಸಾಗಿಲ್ಲ ಮತ್ತು ಇನ್ನೂ ಕೆಲವು ಜನರನ್ನು ಸೋಲಿಸುವ ಶಕ್ತಿ ಹೊಂದಿದ್ದೇನೆ ಎಂದು ಹೇಳಿದ್ದಾರೆ. ಪುಣೆಯ ಹವೇಲಿ ತಹಸಿಲ್ನ ಚಾರ್ಕೋಲಿಯಲ್ಲಿ ನಡೆದ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಮಾತನಾಡಿದ ಪವಾರ್, ನನಗೆ ನಿಮ್ಮ ವಿರುದ್ಧ ದೂರು ಇದೆ. ನಿಮ್ಮ ಭಾಷಣಗಳಲ್ಲಿ ನೀವೆಲ್ಲರೂ ನನಗೆ 83 ವರ್ಷ, ನನಗೆ 84 ವರ್ಷ ಎನ್ನುತ್ತೀರಿ. ಆದರೆ ನನಗಿನ್ನೂ ವಯಸ್ಸಾಗಿಲ್ಲ, ಕೆಲವರನ್ನು ಸೋಲಿಸುವ ಶಕ್ತಿ ಹೊಂದಿದ್ದೇನೆ ಚಿಂತಿಸಬೇಡಿ ಎಂದಿದ್ದಾರೆ.
ಈ ವರ್ಷ ಜುಲೈ 2 ರಂದು ಅಜಿತ್ ಪವಾರ್ ಮತ್ತು ಇತರ ಎಂಟು ಶಾಸಕರು ಏಕನಾಥ್ ಶಿಂಧೆ ಸರ್ಕಾರಕ್ಕೆ ಸೇರಿದ ನಂತರ ಶರದ್ ಪವಾರ್ ನೇತೃತ್ವದ ಎನ್ಸಿಪಿ ವಿಭಜನೆಯಾಯಿತು. ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪನಿಗೆ ವಯಸ್ಸಾಗಿದೆ ಮತ್ತು ಮುಂದಿನ ಪೀಳಿಗೆಗೆ ಪಕ್ಷದ ಆಡಳಿತವನ್ನು ವಹಿಸಿಕೊಳ್ಳಲು ದಾರಿ ಮಾಡಿಕೊಡಬೇಕು ಎಂದು ಹೇಳಿದರು. ಡಿಸೆಂಬರ್ 12 ರಂದು ಕೇಂದ್ರದ ಮಾಜಿ ಕೃಷಿ ಸಚಿವರ ಜನ್ಮದಿನದ ಅಂಗವಾಗಿ ಇಲ್ಲಿ ಎತ್ತಿನಗಾಡಿ ಓಟವನ್ನು ಆಯೋಜಿಸಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್
