

ಬಳ್ಳಾರಿ, 18 ನವೆಂಬರ್ (ಹಿ.ಸ):
ಆ್ಯಂಕರ್ : ಭಾರತೀಯ ಲಲಿತ ಕಲೆಗಳು ಸಂಸ್ಕøತಿಯ ಅವಿಭಾಜ್ಯ ಅಂಗಗಳಾಗಿದ್ದು, ಮಕ್ಕಳಲ್ಲಿ ಸಂಗೀತ, ಸಾಹಿತ್ಯ, ನೃತ್ಯ, ಚಿತ್ರಕಲೆ, ಅಭಿನಯ ಇವುಗಳನ್ನು ಕಲಿಸುವುದರಿಂದ ಸೃಜನಶೀಲತೆ ಹೆಚ್ಚಳವಾಗುತ್ತದೆ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಡಾ. ಅನಂತ ಎಲ್.ಝಂಡೇಕರ್ ಅವರು ತಿಳಿಸಿದ್ದಾರೆ.
ಬಂಡಿಹಟ್ಟಿಯ ಶ್ರೀರಮಲಾದೇವಿ ದೇವಸ್ಥಾನದ ಹತ್ತಿರದಲ್ಲಿ ಸ್ವರ ಸ್ಪಂದನ ಸಂಗೀತ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ಕನ್ನಡಾಂಬೆಗೆ ನಮನ’ ಎಂಬ ಸುಗಮ ಸಂಗೀತ ಹಾಗೂ ಸಮೂಹ ನೃತ್ಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ಎಂಬ ಹೆಸರು ಪಡೆದು ಈಗ 50 ವರ್ಷಗಳೇ ಸಂದಿವೆ. ಇಂತಹ ಸಂದರ್ಭದಲ್ಲಿ ಬಂಡಹಟ್ಟಿಯಂತಹ ಪ್ರದೇಶದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ. ಈ ಪ್ರದೇಶದಲ್ಲಿ ಜಾನಪದ ರಂಗಭೂಮಿಯಾದ ಬಯಲಾಟವನ್ನು ಸಹ ಅಭಿನಯಿಸುತ್ತಿರುವುದು ಶ್ಲಾಘನೀಯ. ಈ ಕಾರ್ಯಕ್ರಮದಲ್ಲಿ ಬಾಲಕಿಯರು ಭರತನಾಟ್ಯ ನಾಟ್ಯ ನೃತ್ಯವನ್ನು ಅಭಿನಯಿಸುವುದು ಇಲ್ಲಿನ ಸಾಂಸ್ಕøತಿಕ ಹಿರಿಮೆಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಸರಳಾದೇವಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಕೆ.ಬಸಪ್ಪ ಅವರು ಮಾತನಾಡಿ ಗಡಿನಾಡಿನಂತಹ ಪ್ರದೇಶಗಳಲ್ಲಿ ಕನ್ನಡ ಬಳಕೆ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಸಾಹಿತ್ಯ, ಸಂಸ್ಕøತಿ, ಸಂಗೀತ ಮತ್ತು ನೃತ್ಯ ಕಲೆಗಳನ್ನು ಪ್ರದರ್ಶಿಸುತ್ತಿರುವುದು ಉತ್ತಮ ಕೆಲಸ ಎಂದು ನುಡಿದರು.
ವೇದಿಕೆಯ ಮೇಲೆ ಅಧ್ಯಕ್ಷತೆಯನ್ನು ಶ್ರೀರಮಲಾದೇವಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಕೆ.ಬಸವರಾಜ ಅವರು ವಹಿಸಿದ್ದರು. 29ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಕೆ.ಮಂಜುಳಾ ಉಮಾಪತಿ ಅವರು ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅತಿಥಿಗಳಾಗಿ ನಿವೃತ್ತ ಮುಖ್ಯಗುರುಗಳಾದ ಷಣ್ಮುಖಪ್ಪ, ಮುಖಂಡರಾದ ದೊಡ್ಡ ಈರಪ್ಪ, ಡಾ.ಕೆ.ಬಸಪ್ಪ, ಕೆ.ಪರಮೇಶ್ವರಪ್ಪ, ದೊಡ್ಡಗಾಳೆಪ್ಪ, ಮರಿಈರಣ್ಣ, ಗುಜರಿ ಬಸವರಾಜ, ಶಿವಶರಣ, ಕೆ.ರಾಮಲಿಂಗ, ಬಿ.ಗಾದಿಲಿಂಗಪ್ಪ, ಆಲಂಭಾಷಾ, ಉಪಸ್ಥಿತರಿದ್ದರು.
ಸಾಂಸ್ಕøತಿಕ ಕಾರ್ಯಕ್ರಮ:
ಬಂಡಿಹಟ್ಟಿಯ ಗುರು , ದೇವರಾಜ ಉತ್ತನುರು, ಎನ್.ಮಾನತಾ, ಅನಿಲ್ ನೇಕಾರ, ಇವರು ಕನ್ನಡ ಗೀತೆಗಳನ್ನು ಗಾಯನ ಮಾಡಿದರು. ಯರ್ರಂಗಳಿಗಿಯ ಕುಮಾರಿ ಸೌಮ್ಯ ಮತ್ತು ತಂಡದವರು ಸಮೂಹ ನೃತ್ಯ ಪ್ರದರ್ಶಿಸಿದರು.
ಸುಗಮಸಂಗೀತವನ್ನು ಚಂದ್ರಶೇಖರ ಹೆಚ್, ಸಂಗೀತ ಶಿಕ್ಷಕ ಶಿವಕುಮಾರ ಕೆ.ಜಿ. , ಕೊತ್ತಲಚಿಂತೆಯ ಸಂಗೀತ ಶಿಕ್ಷಕ ಶರಣಕುಮಾರ, ಎಲ್ಲಪುರದ ಕಲಾವಿದ ಬಾಬು, ಕೆಪಿಎಸ್ ಬಾಲಕಿಯರ ಶಾಲೆಯ ಸಂಗೀತ ಶಿಕ್ಷಕಿ ಸುರಯ್ಯಾ ಬೇಗಂ, ಶ್ರೀ ಕಳಾಂಜಲಿ ಕಲಾ ಟ್ರಸ್ಟ್ನ ಶ್ರೀಜಾರರೆಡ್ಡಿ, ಚಿತ್ರಕಲಾ ಶಿಕ್ಷಕ ಮಂಜುನಾಥ ಕೆ.ಜಿ. ಇವರು ಕಾವ್ಯ ಕುಂಚ ಗಾಯನ ನಡೆಸಿಕೊಟ್ಟÀರು. ಬಂಡಿಹಟ್ಟಿಯ ಕಲಾವಿದರಾದ ಎನ್.ಹರ್ಷಿತ, ಎಆಂ.ವರ್ಷಿತ, ಲಿಶಿಕಾ ಜಾಧವ್, ಎನ್.ಅಕ್ಷಿತಾ, ಕೆ.ಅಮೃತ, ಕೆ.ಕವನ ಇವರು ನೃತ್ಯ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ವಾದ್ಯದ ಸಹಕಾರವನ್ನು ಮೈಸೂರಿನ ಡಿ.ಎನ್.ಇಂದ್ರಸ್ಮಿತ್ , ತಬಲ ಸಾತ್ ಯೋಗೇಶ್ ಬಣಗಾರ ಸಂಗನಕಲ್ಲು ಇವರ ನೆರವೇರಿಸಿದರು. ಈ ಕಾರ್ಯಕ್ರಮಕ್ಕೆ ಶ್ರೀರಮಲಾದೇವಿ ಸೇವಾ ಟ್ರಸ್ಟ್ನವರು ಸಹಕಾರ ನೀಡಿದ್ದರು.
ಮಾನ್ಯತಾ ಪ್ರಾರ್ಥಿಸಿದರು. ಸ್ವರ ಸ್ಪಂದನ ಸಂಗೀತ ಸಂಸ್ಥೆಯ ಅಧ್ಯಕ್ಷ ವಸಂತ ಕುಮಾರ್ ಇವರು ಸ್ವಾಗತಿಸಿದರು. ಆಲಂಬಾಷ ಕಾರ್ಯಕ್ರಮ ನಿರೂಪಿಸಿದರು. ಶಿವಕುಮಾರ್ ವಂದಿಸಿದರು.
